ಜೋಗ್ ನಲ್ಲಿ ಆಧುನಿಕ ಸ್ಪರ್ಶಗೊಂಡ ಶರಾವತಿ ಹೈಡೆಲ್ ವಿದ್ಯುತ್ ಯೋಜನೆ 
ರಾಜ್ಯ

ನವೀಕರಣಗೊಂಡ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಗೆ ಹೈಟೆಕ್ ಸ್ಪರ್ಶ

: ಅಗ್ನಿ ದುರಂತದಲ್ಲಿ ನಾಶವಾಗಿ ಹೋಗಿದ್ದ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಯ ನಿಯಂತ್ರಣ ...

ಶಿವಮೊಗ್ಗ: ಅಗ್ನಿ ದುರಂತದಲ್ಲಿ ನಾಶವಾಗಿ ಹೋಗಿದ್ದ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಯ ನಿಯಂತ್ರಣ ಕೊಠಡಿಗೆ ಇದೀಗ ಹೈಟೆಕ್ ಸ್ಪರ್ಶ ನೀಡಿ ಅತ್ಯಾಧುನಿಕಗೊಳಿಸಲಾಗಿದೆ. ಸ್ಕಾಡಾ(ಮೇಲ್ವಿಚಾರಣೆ ನಿಯಂತ್ರಣ ಮತ್ತು ಅಂಕಿಅಂಶ ಪಡೆಯುವಿಕೆ) ತಂತ್ರಜ್ಞಾನದ ಮೂಲಕ ಅತ್ಯಾಧುನಿಕಗೊಳಿಸಲಾಗಿದ್ದು 6 ತಿಂಗಳಲ್ಲಿ ನಿಯಂತ್ರಣ ಘಟಕಕ್ಕೆ ನವೀಕರಣ ನೀಡಿ ಮೊನ್ನೆ ಶುಕ್ರವಾರ ಇದನ್ನು ಉದ್ಘಾಟಿಸಲಾಯಿತು.

2016ರ ಫೆಬ್ರವರಿ 18ರಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕ ಸಂಪೂರ್ಣವಾಗಿ ಹಾನಿಯಾಗಿತ್ತು. ತಾಂತ್ರಿಕ ದೋಷದಿಂದ ಬೆಂಕಿ ಹತ್ತಿ ಉರಿದು ಇತರೆಡೆಗಳಿಗೆ ವಿಸ್ತರಣೆಯಾಗಿ ಕೇಬಲ್ ಗಳು, ಕಟ್ಟಡ ಮತ್ತು ನಿಯಂತ್ರಣ ಕೊಠಡಿ, ಜನರೇಟರ್ ಮತ್ತು ಟರ್ಬಿನ್ ಗಳು ಸಹ ಹಾನಿಗೀಡಾಗಿದ್ದವು. ಹೀಗಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇಲ್ಲಿಂದ ಕೆಲ ಸಮಯಗಳವರೆಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಬದಲಿ ಎರಡು ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಿತ್ತು.

ಇದಾದ ಬಳಿಕ ಸರ್ಕಾರ ಇಡೀ ಯೋಜನೆಯ ಘಟಕವನ್ನು ನವೀಕರಿಸಲು ನಿರ್ಧರಿಸಿತು. ಅದರ ಪ್ರಕಾರ, ಕೇವಲ 178 ದಿನಗಳಲ್ಲಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕವನ್ನು ನವೀಕರಿಸಲಾಯಿತು. ಅಗ್ನಿ ಅವಘಡದ ನಂತರ ಕೆಪಿಸಿಎಲ್ ಎಲ್ಲಾ 10 ವಿದ್ಯುತ್ ಉತ್ಪಾದನೆ ಘಟಕಗಳನ್ನು ಅಕ್ಟೋಬರ್ 14ರೊಳಗೆ ದುರಸ್ತಿಗೊಳಿಸಿತು.

ನಂತರ ಕೆಪಿಸಿಎಲ್ ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕಕ್ಕೆ  ಡಿಜಿಟಲ್ ಸ್ಪರ್ಶ ನೀಡಿತು. ಈ ನಿಯಂತ್ರಣ ಘಟಕವನ್ನು ಕೈಗಾರಿಕಾ ಘಟಕಗಳು ಮತ್ತು ಸಾಧನಗಳನ್ನು ನಿಯಂತ್ರಿಸಿ ನಿರ್ವಹಿಸಲು ಬಳಸಲಾಗುತ್ತದೆ. ಪ್ರಸ್ತುತ ಶರಾವತಿ ವಿದ್ಯುತ್ ಘಟಕ 1,035 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT