ಜೋಗ್ ನಲ್ಲಿ ಆಧುನಿಕ ಸ್ಪರ್ಶಗೊಂಡ ಶರಾವತಿ ಹೈಡೆಲ್ ವಿದ್ಯುತ್ ಯೋಜನೆ 
ರಾಜ್ಯ

ನವೀಕರಣಗೊಂಡ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಗೆ ಹೈಟೆಕ್ ಸ್ಪರ್ಶ

: ಅಗ್ನಿ ದುರಂತದಲ್ಲಿ ನಾಶವಾಗಿ ಹೋಗಿದ್ದ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಯ ನಿಯಂತ್ರಣ ...

ಶಿವಮೊಗ್ಗ: ಅಗ್ನಿ ದುರಂತದಲ್ಲಿ ನಾಶವಾಗಿ ಹೋಗಿದ್ದ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಯ ನಿಯಂತ್ರಣ ಕೊಠಡಿಗೆ ಇದೀಗ ಹೈಟೆಕ್ ಸ್ಪರ್ಶ ನೀಡಿ ಅತ್ಯಾಧುನಿಕಗೊಳಿಸಲಾಗಿದೆ. ಸ್ಕಾಡಾ(ಮೇಲ್ವಿಚಾರಣೆ ನಿಯಂತ್ರಣ ಮತ್ತು ಅಂಕಿಅಂಶ ಪಡೆಯುವಿಕೆ) ತಂತ್ರಜ್ಞಾನದ ಮೂಲಕ ಅತ್ಯಾಧುನಿಕಗೊಳಿಸಲಾಗಿದ್ದು 6 ತಿಂಗಳಲ್ಲಿ ನಿಯಂತ್ರಣ ಘಟಕಕ್ಕೆ ನವೀಕರಣ ನೀಡಿ ಮೊನ್ನೆ ಶುಕ್ರವಾರ ಇದನ್ನು ಉದ್ಘಾಟಿಸಲಾಯಿತು.

2016ರ ಫೆಬ್ರವರಿ 18ರಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕ ಸಂಪೂರ್ಣವಾಗಿ ಹಾನಿಯಾಗಿತ್ತು. ತಾಂತ್ರಿಕ ದೋಷದಿಂದ ಬೆಂಕಿ ಹತ್ತಿ ಉರಿದು ಇತರೆಡೆಗಳಿಗೆ ವಿಸ್ತರಣೆಯಾಗಿ ಕೇಬಲ್ ಗಳು, ಕಟ್ಟಡ ಮತ್ತು ನಿಯಂತ್ರಣ ಕೊಠಡಿ, ಜನರೇಟರ್ ಮತ್ತು ಟರ್ಬಿನ್ ಗಳು ಸಹ ಹಾನಿಗೀಡಾಗಿದ್ದವು. ಹೀಗಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇಲ್ಲಿಂದ ಕೆಲ ಸಮಯಗಳವರೆಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಬದಲಿ ಎರಡು ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಿತ್ತು.

ಇದಾದ ಬಳಿಕ ಸರ್ಕಾರ ಇಡೀ ಯೋಜನೆಯ ಘಟಕವನ್ನು ನವೀಕರಿಸಲು ನಿರ್ಧರಿಸಿತು. ಅದರ ಪ್ರಕಾರ, ಕೇವಲ 178 ದಿನಗಳಲ್ಲಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕವನ್ನು ನವೀಕರಿಸಲಾಯಿತು. ಅಗ್ನಿ ಅವಘಡದ ನಂತರ ಕೆಪಿಸಿಎಲ್ ಎಲ್ಲಾ 10 ವಿದ್ಯುತ್ ಉತ್ಪಾದನೆ ಘಟಕಗಳನ್ನು ಅಕ್ಟೋಬರ್ 14ರೊಳಗೆ ದುರಸ್ತಿಗೊಳಿಸಿತು.

ನಂತರ ಕೆಪಿಸಿಎಲ್ ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕಕ್ಕೆ  ಡಿಜಿಟಲ್ ಸ್ಪರ್ಶ ನೀಡಿತು. ಈ ನಿಯಂತ್ರಣ ಘಟಕವನ್ನು ಕೈಗಾರಿಕಾ ಘಟಕಗಳು ಮತ್ತು ಸಾಧನಗಳನ್ನು ನಿಯಂತ್ರಿಸಿ ನಿರ್ವಹಿಸಲು ಬಳಸಲಾಗುತ್ತದೆ. ಪ್ರಸ್ತುತ ಶರಾವತಿ ವಿದ್ಯುತ್ ಘಟಕ 1,035 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

‘SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ’: ಮಾಜಿ ಮುಖ್ಯ ಚುನಾವಣಾ ಆಯುಕ್ತ S Y Quraishi

ಯುಪಿ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ನಮಾಜ್: SP ನಾಯಕನ ವಿರುದ್ಧ FIR ದಾಖಲು! ಅಪಮಾನ ಎಂದ ಕಾಂಗ್ರೆಸ್!

'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ