ಜೋಗ್ ನಲ್ಲಿ ಆಧುನಿಕ ಸ್ಪರ್ಶಗೊಂಡ ಶರಾವತಿ ಹೈಡೆಲ್ ವಿದ್ಯುತ್ ಯೋಜನೆ 
ರಾಜ್ಯ

ನವೀಕರಣಗೊಂಡ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಗೆ ಹೈಟೆಕ್ ಸ್ಪರ್ಶ

: ಅಗ್ನಿ ದುರಂತದಲ್ಲಿ ನಾಶವಾಗಿ ಹೋಗಿದ್ದ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಯ ನಿಯಂತ್ರಣ ...

ಶಿವಮೊಗ್ಗ: ಅಗ್ನಿ ದುರಂತದಲ್ಲಿ ನಾಶವಾಗಿ ಹೋಗಿದ್ದ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಯ ನಿಯಂತ್ರಣ ಕೊಠಡಿಗೆ ಇದೀಗ ಹೈಟೆಕ್ ಸ್ಪರ್ಶ ನೀಡಿ ಅತ್ಯಾಧುನಿಕಗೊಳಿಸಲಾಗಿದೆ. ಸ್ಕಾಡಾ(ಮೇಲ್ವಿಚಾರಣೆ ನಿಯಂತ್ರಣ ಮತ್ತು ಅಂಕಿಅಂಶ ಪಡೆಯುವಿಕೆ) ತಂತ್ರಜ್ಞಾನದ ಮೂಲಕ ಅತ್ಯಾಧುನಿಕಗೊಳಿಸಲಾಗಿದ್ದು 6 ತಿಂಗಳಲ್ಲಿ ನಿಯಂತ್ರಣ ಘಟಕಕ್ಕೆ ನವೀಕರಣ ನೀಡಿ ಮೊನ್ನೆ ಶುಕ್ರವಾರ ಇದನ್ನು ಉದ್ಘಾಟಿಸಲಾಯಿತು.

2016ರ ಫೆಬ್ರವರಿ 18ರಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕ ಸಂಪೂರ್ಣವಾಗಿ ಹಾನಿಯಾಗಿತ್ತು. ತಾಂತ್ರಿಕ ದೋಷದಿಂದ ಬೆಂಕಿ ಹತ್ತಿ ಉರಿದು ಇತರೆಡೆಗಳಿಗೆ ವಿಸ್ತರಣೆಯಾಗಿ ಕೇಬಲ್ ಗಳು, ಕಟ್ಟಡ ಮತ್ತು ನಿಯಂತ್ರಣ ಕೊಠಡಿ, ಜನರೇಟರ್ ಮತ್ತು ಟರ್ಬಿನ್ ಗಳು ಸಹ ಹಾನಿಗೀಡಾಗಿದ್ದವು. ಹೀಗಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇಲ್ಲಿಂದ ಕೆಲ ಸಮಯಗಳವರೆಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಬದಲಿ ಎರಡು ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಿತ್ತು.

ಇದಾದ ಬಳಿಕ ಸರ್ಕಾರ ಇಡೀ ಯೋಜನೆಯ ಘಟಕವನ್ನು ನವೀಕರಿಸಲು ನಿರ್ಧರಿಸಿತು. ಅದರ ಪ್ರಕಾರ, ಕೇವಲ 178 ದಿನಗಳಲ್ಲಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕವನ್ನು ನವೀಕರಿಸಲಾಯಿತು. ಅಗ್ನಿ ಅವಘಡದ ನಂತರ ಕೆಪಿಸಿಎಲ್ ಎಲ್ಲಾ 10 ವಿದ್ಯುತ್ ಉತ್ಪಾದನೆ ಘಟಕಗಳನ್ನು ಅಕ್ಟೋಬರ್ 14ರೊಳಗೆ ದುರಸ್ತಿಗೊಳಿಸಿತು.

ನಂತರ ಕೆಪಿಸಿಎಲ್ ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕಕ್ಕೆ  ಡಿಜಿಟಲ್ ಸ್ಪರ್ಶ ನೀಡಿತು. ಈ ನಿಯಂತ್ರಣ ಘಟಕವನ್ನು ಕೈಗಾರಿಕಾ ಘಟಕಗಳು ಮತ್ತು ಸಾಧನಗಳನ್ನು ನಿಯಂತ್ರಿಸಿ ನಿರ್ವಹಿಸಲು ಬಳಸಲಾಗುತ್ತದೆ. ಪ್ರಸ್ತುತ ಶರಾವತಿ ವಿದ್ಯುತ್ ಘಟಕ 1,035 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT