ನಿಲ್ಗಾಯ್ 
ರಾಜ್ಯ

ಇತ್ತೀಚಿನ ವರ್ಷಗಳಲ್ಲಿ ಅಪರೂಪಕ್ಕೆ ಎಂಬಂತೆ " ನಿಲ್ಗಾಯ್ " ಪ್ರತ್ಯಕ್ಷ

ಇತ್ತೀಚಿನ ವರ್ಷಗಳಲ್ಲಿ ಅಪರೂಪಕ್ಕೆ ಎಂಬಂತೆ ರಾಜ್ಯದಲ್ಲಿ ನಿಲ್ ಗಾಯ್ ಪ್ರತ್ಯಕ್ಷಗೊಂಡಿದೆ. ಭದ್ರಾ ಹುಲಿ ಸಂರಕ್ಷಿತಾರಣ್ಯದ ಮುತ್ತೊಡಿ ವಲಯದಲ್ಲಿ ನಿಲ್ ಗಾಯ್ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.

ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಅಪರೂಪಕ್ಕೆ ಎಂಬಂತೆ ರಾಜ್ಯದಲ್ಲಿ ನಿಲ್ಗಾಯ್  ಪ್ರತ್ಯಕ್ಷಗೊಂಡಿದೆ. ಭದ್ರಾ ಹುಲಿ ಸಂರಕ್ಷಿತಾರಣ್ಯದ   ಮುತ್ತೊಡಿ ವಲಯದಲ್ಲಿ ನಿಲ್ಗಾಯ್ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.

ಈ ಅರಣ್ಯದ ಸಪಾರಿ ರಸ್ತೆಯಲ್ಲಿ ಆರೋಗ್ಯಪೂರ್ಣವಾದ ನಿಲ್ಗಾಯ್  ನಡೆದು ಹೋಗಿದೆ. 1952ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಾಕೆರೆ ವಲಯದಲ್ಲಿ ಈ ರೀತಿಯ ಪ್ರಾಣಿ ಕಂಡುಬಂದಿತ್ತು. ಆದರೆ , ತದನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ದಿ ನ್ಯೂ  ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಭದ್ರಾ ಹುಲಿ ರಕ್ಷಿತಾರಣ್ಯದ ಅರಣ್ಯಾಧಿಕಾರಿ ಹೆಚ್. ಸಿ. ಕಾಂತರಾಜ್ ,ಇಂತಹ ಪ್ರಾಣಿಗಳು ಕಾಣಿಸಿಕೊಂಡದ್ದು ಆಶ್ಚರ್ಯ ಮೂಡಿಸಿದೆ. ಭದ್ರಾ ಅರಣ್ಯದಲ್ಲಿ ಆರೋಗ್ಯಕರವಾದ ಹುಲಿ, ಚಿರತೆಗಳಿವೆ. ಮೂರ್ನಾಲ್ಕು ದಿನಗಳಿಗೊಮ್ಮೆ ಪ್ರಾಣಿಗಳನ್ನು ವೀಕ್ಷಿಸಲಾಗುವುದು  ಅರಣ್ಯದಲ್ಲಿ ಪ್ರತಿ 2 ಚದರ ಕಿಲೋಮೀಟರ್ ಗೆ ಒಂದರಂತೆ ಕ್ಯಾಮರಾ ಅಳವಡಿಸಲಾಗಿದ್ದು, ಅದರಲ್ಲಿ ನಿಲ್ಗಾಯ್  ಪ್ರತ್ಯಕ್ಷಗೊಂಡಿದೆ ಎಂದು ತಿಳಿಸಿದ್ದಾರೆ.

ವನ್ಯಜೀವಿ ತಜ್ಞ ವಿ. ವೀರೇಶ್  ಮಾತನಾಡಿ, ನಿಲ್ಗಾಯ್  ಹೇಗೆ ಮುತ್ತೊಡಿ ಅರಣ್ಯ ಪ್ರವೇಶಿಸಿತ್ತು ಎಂಬ ಬಗ್ಗೆ ಪ್ರಶ್ನಿಸಿದ್ದಾರೆ.  ಮಾಂಸದ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ನಿಲ್ಗಾಯ್ ನ್ನು ಉತ್ತರ ಭಾಗದ ರಾಜ್ಯಗಳು ಸೇರಿದಂತೆ ಇತರೆಡೆ ಸಾಗಣೆ ಮಾಡಲಾಗುತ್ತಿದೆ. ಉರಸ್  ಆಚರಣೆ ಸಂದರ್ಭದಲ್ಲಿ ಬಾಬಾಬುಡನ್ ಗಿರಿ ಬೆಟ್ಟದಲ್ಲಿ ಈ ವನ್ಯಜೀವಿಯನ್ನು ತರಲಾಗಿತ್ತು. ಬಾಬಾಬುಡನ್ ಗಿರಿ ಬೆಟ್ಟಕ್ಕೆ ಮುತ್ತೊಡಿ ಅರಣ್ಯ ಹತ್ತಿರದಲ್ಲಿರುವುದರಿಂದ ಅಲ್ಲಿಂದ ತಪ್ಪಿಸಿಕೊಂಡು ಬಂದಿರಬಹುದೆಂದು ಹೇಳುತ್ತಾರೆ.

ಆದಾಗ್ಯೂ, ಮುತ್ತೊಡಿ ಅರಣ್ಯದಲ್ಲಿ ನಿಲ್ಗಾಯ್ ಕಾಣಿಸಿಕೊಂಡಿರುವುದು ಅರಣ್ಯದೊಳಗಿನ ಚೆಕ್ ಪೋಸ್ಟ್ ಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಮುತ್ತೊಡಿ ಅರಣ್ಯದಲ್ಲಿ ಕಳ್ಳ ಬೇಟೆಗಾರರ ಹಾವಳಿಯೂ ಹೆಚ್ಚಾಗಿದ್ದು, ಕಳೆದ ವರ್ಷ 23 ಬೇಟೆಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ನಿಟ್ಟಿನಲ್ಲಿಯೂ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT