ಸಾಂದರ್ಭಿಕ ಚಿತ್ರ 
ರಾಜ್ಯ

ಖೋಟಾ ನೋಟು ಚಲಾವಣೆ ಅಡ್ಡೆ ಮೇಲೆ ಎನ್ಐಎ ದಾಳಿ: ಇಬ್ಬರ ಬಂಧನ

ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಅಡ್ಡೆ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ...

ಬೆಳಗಾವಿ: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಅಡ್ಡೆ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. 
ಚಕ್ಕೋಡಿ ನಿವಾಸಿ ಅಶೋಕ್ ಕಂಬಾರ್ (45) ಮತ್ತು ಪಶ್ಚಿಮ ಬಂಗಾಳ ನಿವಾಸಿ ದಾಲಿಮ್ ಮಿಯಾ (21) ಬಂಧನಕ್ಕಳಗಾದ ಆರೋಪಿಗಳಾಗಿದ್ದಾರೆ.
ಮಿಯಾ ಖೋಟಾನೋಟು ಚಲಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದ. ಕೆಲ ದಿನಗಳ ಹಿಂದಷ್ಟೇ ಮಿಯಾ ಎಂಬಾತನನ್ನು ಪೊಲೀಸರು ಪುಣೆಯಲ್ಲಿ ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಚಿಕ್ಕೋಡಿ ತಾಲೂಕು ನಿಪ್ಪಾಣಿ ಪಟ್ಟಣದಲ್ಲಿ ಕೆ ದಿನ ವಾಸವಾಗಿರುವ ಕುರಿತು ಮಿಯಾ ಬಾಯ್ಬಿಟ್ಟಿದ್ದ. ಅಲ್ಲದೆ, ಕೆಲ ಸ್ಥಳೀಯರೊಂದಿಗೆ ಸೇರಿಕೊಂಡು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ. 
ಮಿಯಾ ಕೊಟ್ಟ ಮಾಹಿತಿಯನ್ವಯ ಬೆಳಗಾವಿಯ ಖೋಟಾನೋಟು ಅಡ್ಡೆ ಮೇಲೆ ದಾಳಇ ನಡೆಸಿದ ಎನ್ಐಎ ರೂ.2 ಸಾವಿರ ಮುಖಬೆಲೆಯ 41 ಖೋಟಾನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

ನೇಪಾಳದಿಂದ ಭಾರತಕ್ಕೆ ಅಪಮಾನ?; ಹುದ್ದೆ ಅಂತರದ ಕಾರಣ ನೀಡಿ ವಿದೇಶಾಂಗ ಕಾರ್ಯದರ್ಶಿ ಭೇಟಿಗೆ ನಿರಾಕರಿಸಿದ ಪ್ರಧಾನಿ ಬಾಲೇನ್ ಶಾ: ವರದಿ

'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..'.: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು

ಎರಡು ವರ್ಷದವೆರೆಗಿನ 'ಸಮ್ಮತಿಯ ಲೈಂಗಿಕ ಸಂಬಂಧ' ಅತ್ಯಾಚಾರವೇ? ಕೋರ್ಟ್ ಹೇಳಿದ್ದೇನು!

IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುತ್ತಲೇ ಅಸಭ್ಯ ವರ್ತನೆ ತೋರಿದ ಸ್ಟಾರ್ ಬ್ಯಾಟರ್ Tim David, ಬಿಸಿಸಿಐ ಕೆಂಗಣ್ಣು!

SCROLL FOR NEXT