ಬಸವರಾಜ ರಾಯ ರೆಡ್ಡಿ 
ರಾಜ್ಯ

ಸರ್ಕಾರ ಅಧಿಕಾರಿಗಳನ್ನು 9 ದಿನಗಳಲ್ಲೇ ವರ್ಗಾವಣೆ ಮಾಡಬಹುದು: ಬಸವರಾಜ ರಾಯರೆಡ್ಡಿ

ಒಂದು ವೇಳೆ ಸರ್ಕಾರ ಬಯಸಿದರೇ ಒಂಬತ್ತು ದಿನಗಳೊಳಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ...

ಕೊಪ್ಪಳ: ಒಂದು ವೇಳೆ ಸರ್ಕಾರ ಬಯಸಿದರೇ ಒಂಬತ್ತು ದಿನಗಳೊಳಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪದೇ ಪದೇ ವರ್ಗಾವಣೆ ಕುರಿತು ಎದ್ದಿದ್ದ ಚರ್ಚೆ ಸಂಬಂಧ ಪ್ರತಿಕ್ರಿಯಿಸಿರುವ ಅವರು ಸರ್ಕಾರ ಬಯಸಿದರೇ 9 ದಿನಗಳೊಳಗೆ ವರ್ಗಾವಣೆ ಮಾಡಬಹುದು, ಸರ್ಕಾರದ ಆದೇಶವನ್ನು  ಅಧಿಕಾರಿಗಳು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಕೊಪ್ಪಳ ಡಿಸಿ ಅನೂಪ್ ಶೆಟ್ಟಿ  ಅವರ ವರ್ಗಾವಣೆಯನ್ನು ಸಿಎಟಿ ತಡೆ ಹಿಡಿದಿದೆ. ಅನೂಪ್ ಶೆಟ್ಟಿ ಅವರನ್ನು 9 ತಿಂಗಳ ಹಿಂದೆ ಕೊಪ್ಪಳಕ್ಕೆ ವರ್ಗಾವಣೆ ಮಾಡಲಾಗಿತ್ತು., ಮರಳು ಮತ್ತು ಲಿಕ್ಕರ್ ಮಾಫಿಯಾ ವಿರುದ್ದ ಅನೂಪ್ ಶೆಟ್ಟಿ ಭಾರೀ ಕೆಲಸ ಮಾಡಿದ್ದರು, ಈ ಸಂಬಂಧ ಸಚಿವರನ್ನು ಪ್ರಶ್ನಿಸಿದಾಗ, ಪೋಸ್ಟಿಂಗ್ ಆದ ಅವಧಿಯೊಳಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್ 12 ರಂದು ಅನೂಪ್ ಶೆಟ್ಟಿ ಅವರನ್ನು  ಬೆಂಗಳೂರಿನ  ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವಧಿ ಪೂರ್ವ ವರ್ಗಾವಣೆಯನ್ನು ಸಿಎ
ಟಿ ತಡೆ ಹಿಡಿದಿತ್ತು.
ಸಿದ್ದರಾಮಯ್ಯ ಅವರದ್ದು ಬೇಜವಾಬ್ದಾರಿ ಸರ್ಕಾರ, ಪ್ರಾಮಾಣಿಕ  ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುತ್ತಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಆರೋಪಿಸಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT