ಬೆಂಗಳೂರು: ಟಿಬಿ ನಿರೋಧಕ ಔಷಧಿಗಳನ್ನು ಕೇಳಿಕೊಂಡು ತಮ್ಮಲ್ಲಿಗೆ ಬರುವ ಕ್ಷಯರೋಗಿಗಳ ಕುರಿತಂತೆ ಸರ್ಕಾರಕ್ಕೆ ಮಾಹಿತಿ ನೀಡಲು ವಿಫಲವಾದ ಔಷಧ ವ್ಯಾಪಾರಿಗಳು ಆರು ತಿಂಗಳಿನಿಂದ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕ್ಷಯರೋಗಿಗಳ ಬಗೆಗೆ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಲು ವಿಫಲರಾದ ಔಷದಿ ವ್ಯಾಪಾರಿಗಲು, ಔಷದಿ ತಯಾರಕರು ಮತ್ತು ಕ್ಷಯರೋಗ ಪೀಡಿತರನ್ನು ಪತ್ತೆ ಹಚ್ಚಿ ಸರಿಯಾದ ಸಾರ್ವಜನಿಕ ಆರೋಗ್ಯ ಕ್ರಮ ತೆಗೆದುಕೊಳ್ಳಲು ವಿಫಲರಾದ ಸಾರ್ವಜನಿಕ ಆರೋಗ್ಯ ಸಿಬ್ಬಂದಿಗಳು ಶಿಕ್ಷೆಗೆ ಗುರಿಯಾಗಬೇಕಾಗುವುದು ಎಂದು ಸಚಿವಾಲಯ ಹೇಳಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 69 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕು ಹರಡುವ ಸಾಧ್ಯತೆಗಳು) ಮತ್ತು 270 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕು ಹರಡುವ ಸಾಧ್ಯತೆ) ಉಲ್ಲೇಖಿಸಿ ಸಚಿವಾಲಯ ಈ ಆದೇಶ ನಿಡಿದೆ.
ಮೇ 7, 2012 ರಂದು.ಭಾರತವು ಕ್ಷಯರೋಗವು ಒಂದು ಗಮನಾರ್ಹವಾದ ರೋಗವೆಂದು ಘೊಷಿಸಿದ್ದು ವೈದ್ಯಕೀಯ ಪ್ರಯೋಗಾಲಯಗಳು,, ವೈದ್ಯರು ಆಸ್ಪತ್ರೆಗಳು ಮತ್ತು ಶುಶ್ರೂಷಾ ಕೇಂದ್ರಗಳು ಕ್ಷಯರೋಗ ನಿರೋಧಕ ಔಷಧಿಗಳನ್ನು ವಿತರಿಸಬೇಕು. ಔಷಧಗಳ ವಿವರಗಳೊಂದಿಗೆ ಆಯಾ ಕ್ಷಯರೋಗಿಗಳ ಕುರಿತಂತೆ ನೋಡಲ್ ಅಧಿಕಾರಿಗಳಿಗೆ ಂಆಹಿತಿ ನಿಡಬೇಕು. ವೈದ್ಯರು ರೋಗಿಗಳ ಮಾಹಿತಿಯನ್ನು ವಿದ್ಯುನ್ಮಾನ ಮಾದ್ಯಮ ಅಥವಾ ಕಡತದ ರೂಪದಲ್ಲಿ ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ನೀಡುವುದು ಕಡ್ಡಾಯವೆಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos