ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕಡಿಮೆ ಅಂಕದಿಂದ ಬೇಸತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ದ್ವಿತೀಯ ಪಿಯುಸಿಯಲ್ಲಿ ಅಂದುಕೊಂಡಷ್ಟು ಅಂಕಗಳು ಸಿಗಲಿಲ್ಲವೆಂದು 17 ವರ್ಷದ ವಿದ್ಯಾರ್ಥಿ ...

ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಅಂದುಕೊಂಡಷ್ಟು ಅಂಕಗಳು ಸಿಗಲಿಲ್ಲವೆಂದು 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.

ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ತೇಜಸ್ ಗೌಡ ಶೇಕಡಾ 90 ಅಂಕ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದನು. ಆದರೆ ಸಿಕ್ಕಿದ್ದು ಶೇಕಡಾ 74ರಷ್ಟು ಮಾತ್ರ. ಈತ ರವಿಕುಮಾರ್ ಎಂಬ ರೈತನ ಪುತ್ರನಾಗಿದ್ದು ವಿದ್ಯಾರಣ್ಯಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು.

ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಫಲಿತಾಂಶ ವೀಕ್ಷಿಸಿದ ನಂತರ 1.45ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫಲಿತಾಂಶ ಬಂದ ಮೇಲೆ ತೇಜಸ್ ತೀವ್ರವಾಗಿ ಅಳುತ್ತಿದ್ದ, ತಾನು ಸಮಾಧಾನ ಕೂಡ ಮಾಡಿದ್ದೆ ಎಂದು ತಂದೆ ರವಿಕುಮಾರ್ ತಿಳಿಸಿದ್ದಾರೆ ಎಂದು ಚಿಕ್ಕಜಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪೋಷಕರು ಟಿವಿ ನೋಡುತ್ತಿದ್ದಾಗ ಮನೆಯ ಕೋಣೆಯೊಳಗೆ ತೇಜಸ್ ಹೋದನು. ಕೆಲ ಹೊತ್ತು ಕಳೆದ ನಂತರ ಪೋಷಕರು ಬಾಗಿಲು ಬಡಿದಾಗ ಆಚೆ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲನ್ನು ಮುರಿದು ಒಳಗೆ ಹೋದಾಗ ಫ್ಯಾನಿಗೆ ನೇಣು ಹಾಕಿರುವುದು ಕಂಡು ಗಾಬರಿಯಾದರು. ಕೂಡಲೇ ಚಿಕ್ಕಜಾಲ ಪೊಲೀಸರಿಗೆ ವಿಷಯ ತಿಳಿಸಲಾಯಿತು.
ಮೃತದೇಹವನ್ನು ಶವಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನಗೆ ಯಾರೂ ಹೂವಿನ ಹಾರ ಹಾಕ್ಬೇಡಿ: ನಿಯೋಜಿತ ಸಿಎಂ ಡಿಕೆಶಿ ಹೀಗೆ ಹೇಳಿದ್ಯಾಕೆ ಗೊತ್ತಾ?

IPL ಫೈನಲ್‌: ಆರ್​​ಸಿಬಿಗೊಂದು ನ್ಯಾಯ, ಗುಜರಾತ್​ಗೊಂದು ನ್ಯಾಯ; ಅಂಪೈರ್ ಔಟ್ ಕೊಟ್ಟಿದ್ದಕ್ಕೆ ಕೆರಳಿದ ಕೊಹ್ಲಿ, ಅನುಷ್ಕಾ, Video!

ಸಂಪುಟ ರಚನೆ ಕಸರತ್ತು: ನಿಯೋಜಿತ ಸಿಎಂ ಡಿಕೆ ಶಿವಕುಮಾರ್, ಹಂಗಾಮಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ

IPL 2026 Final: RCB ತಂಡಕ್ಕೆ 156 ರನ್ ಗುರಿ ನೀಡಿದ Gujarat Titans

ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಬೆನ್ನಲ್ಲೇ ಪಕ್ಷದ ಸಭೆಗೆ 80 TMC ಶಾಸಕರು ಗೈರು!

SCROLL FOR NEXT