ರಾಜ್ಯ

ಬೆಂಗಳೂರು: ನಿಧಿಯಾಸೆಗೆ ಪತ್ನಿಯನ್ನು ಬಲಿ ನೀಡಲು ಮುಂದಾದ ಅರ್ಚಕನ ಬಂಧನ

Raghavendra Adiga
ಬೆಂಗಳೂರು: ನಿಧಿಯ ಆಸೆಗಾಗಿ ತನ್ನ ಪತ್ನಿ ಹಾಗೂ ಮಗಳನ್ನು ಬಲಿ ಕೊಡಲು ತಯಾರಾಗಿದ್ದ ಅರ್ಚಕನೊಬ್ಬನನ್ನು ಬೆಂಗಳೂರು ಬ್ಯಾಡರಹಳ್ಳಿ ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು  ಜ್ಞಾನ ಭಾರತಿ ಬಳಿಯ ಉಲ್ಳಾಲು ದೇವಾಲಯದಲ್ಲಿ ನಿಧಿ ಇದೆ ಎನ್ನುವ ಆಸೆಯಿಂದ ಮಹಲಿಂಗೇಶ್ ಡಿ (46) ತಾನು 18 ವರ್ಷಗಳ ಹಿಂದೆ ವಿವಾಹವಾಗಿದ್ದ ಸವಿತಾಳನ್ನು ಬಲಿ ನೀಡಲು ಸಿದ್ದವಾಗಿದ್ದ. ಈತನಿಗೆ ಮೂವರು ಮಕ್ಕಳಿದ್ದು ಹಿರಿಯ ಮಗಳು 17 ವರ್ಷದವಳ ಮೇಲೆ ಅತ್ಯಾಚಾರ ಎಸಗಿದ್ದ.
ತಂದೆಯ ಕಿರುಕುಳ ತಾಳಲಾರದೆ ಮಗಳು ಮಹಿಳಾ ಆಯೋಗಕ್ಕೆ ದೂರಿತ್ತಿದ್ದಳು. ದೂರಿನ ಹಿನ್ನೆಲೆಯಲ್ಲಿ ಆಯೋಗದ ಸದಸ್ಯರು ಅರ್ಚಕ ಮಹಲಿಂಗೇಶ್ ಮನೆಗೆ ಧಾವಿಸಿ ಪತ್ನಿ, ಮಕ್ಕಳನ್ನು ರಕ್ಷಿಸಿದ್ದಾರೆ.
ಪತ್ನಿ ಹಾಗೂ ಮಗಳ ಹೇಳಿಕೆ ಆಧಾರದಲ್ಲಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.
ಇದೀಗ ಆರೋಪಿಗೆ ನಿಧಿಯ ಸೂಚನೆ ನೀಡಿದ್ದನೆನ್ನಲಾದ ಜ್ಯೋತಿಷಿ ಮಾರ್ತಾಂಡನ ಹುಡುಕಾಟದಲ್ಲಿದ್ದಾರೆ.
SCROLL FOR NEXT