ನನಿಧಿಗಾಗಿ ಪತ್ನಿಯನ್ನು ಬಲಿನೀಡಲು ಮುಂದಾದ ಅರ್ಚಕ ಮಹಲಿಂಗೇಶ್(ಎಡ), ನಿಧಿಗಾಗಿ ಹೋಮಕ್ಕೆ ಸಿದ್ದವಾದ ಹೊಂಡ(ಬಲ) 
ರಾಜ್ಯ

ಬೆಂಗಳೂರು: ನಿಧಿಯಾಸೆಗೆ ಪತ್ನಿಯನ್ನು ಬಲಿ ನೀಡಲು ಮುಂದಾದ ಅರ್ಚಕನ ಬಂಧನ

ನಿಧಿಯ ಆಸೆಗಾಗಿ ತನ್ನ ಪತ್ನಿ ಹಾಗೂ ಮಗಳನ್ನು ಬಲಿ ಕೊಡಲು ತಯಾರಾಗಿದ್ದ ಅರ್ಚಕನೊಬ್ಬನನ್ನು ಬೆಂಗಳೂರು ಬ್ಯಾಡರಹಳ್ಳಿ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ನಿಧಿಯ ಆಸೆಗಾಗಿ ತನ್ನ ಪತ್ನಿ ಹಾಗೂ ಮಗಳನ್ನು ಬಲಿ ಕೊಡಲು ತಯಾರಾಗಿದ್ದ ಅರ್ಚಕನೊಬ್ಬನನ್ನು ಬೆಂಗಳೂರು ಬ್ಯಾಡರಹಳ್ಳಿ ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು  ಜ್ಞಾನ ಭಾರತಿ ಬಳಿಯ ಉಲ್ಳಾಲು ದೇವಾಲಯದಲ್ಲಿ ನಿಧಿ ಇದೆ ಎನ್ನುವ ಆಸೆಯಿಂದ ಮಹಲಿಂಗೇಶ್ ಡಿ (46) ತಾನು 18 ವರ್ಷಗಳ ಹಿಂದೆ ವಿವಾಹವಾಗಿದ್ದ ಸವಿತಾಳನ್ನು ಬಲಿ ನೀಡಲು ಸಿದ್ದವಾಗಿದ್ದ. ಈತನಿಗೆ ಮೂವರು ಮಕ್ಕಳಿದ್ದು ಹಿರಿಯ ಮಗಳು 17 ವರ್ಷದವಳ ಮೇಲೆ ಅತ್ಯಾಚಾರ ಎಸಗಿದ್ದ.
ತಂದೆಯ ಕಿರುಕುಳ ತಾಳಲಾರದೆ ಮಗಳು ಮಹಿಳಾ ಆಯೋಗಕ್ಕೆ ದೂರಿತ್ತಿದ್ದಳು. ದೂರಿನ ಹಿನ್ನೆಲೆಯಲ್ಲಿ ಆಯೋಗದ ಸದಸ್ಯರು ಅರ್ಚಕ ಮಹಲಿಂಗೇಶ್ ಮನೆಗೆ ಧಾವಿಸಿ ಪತ್ನಿ, ಮಕ್ಕಳನ್ನು ರಕ್ಷಿಸಿದ್ದಾರೆ.
ಪತ್ನಿ ಹಾಗೂ ಮಗಳ ಹೇಳಿಕೆ ಆಧಾರದಲ್ಲಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.
ಇದೀಗ ಆರೋಪಿಗೆ ನಿಧಿಯ ಸೂಚನೆ ನೀಡಿದ್ದನೆನ್ನಲಾದ ಜ್ಯೋತಿಷಿ ಮಾರ್ತಾಂಡನ ಹುಡುಕಾಟದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT