ಕುಮಾರದ್ವಾರ ನದಿ 
ರಾಜ್ಯ

ಕೊಡಗಿನಲ್ಲಿ ಸಣ್ಣ ಜಲ ಯೋಜನೆಗೆ ಹಸಿರು ನಿಶಾನೆ!

ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕುಮಾರಧಾರ ನದಿಯುದ್ದಕ್ಕೂ 2014ರಲ್ಲಿ ನೇಮಕಗೊಂಡಿದ್ದ ಸಣ್ಣ ಜಲ ಯೋಜನೆಗೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ.

ಬೆಂಗಳೂರು: ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕುಮಾರಧಾರ ನದಿಯುದ್ದಕ್ಕೂ 2014ರಲ್ಲಿ ನಿರ್ಮಿಸಿ, ನೇಮಕಗೊಂಡಿದ್ದ ಸಣ್ಣ ಜಲ ಯೋಜನೆಗೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ. 
ಇನ್ನು ಪ್ರಾದೇಶಿಕ ಸಚಿವಾಲಯ ಸಮಿತಿ (ಆರ್ಇಸಿ), ದಕ್ಷಿಣ ವಲಯ, ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಅರಣ್ಯ ಅಲ್ಲದ ಉದ್ದೇಶಕ್ಕಾಗಿ ಅರಣ್ಯ ಪ್ರದೇಶವನ್ನು ಹಂಚಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದು ವರದಿಯನ್ನು ಒದಗಿಸುವಂತೆ ನಿರ್ದೇಶಿಸಿತು.
ಕೊಡಗು ಹೈಡೆಲ್ ಯೋಜನೆಗಳ ಪ್ರೈವೇಟ್ ಲಿಮಿಟೆಡ್ ಮಡಿಕೇರಿ ವಿಭಾಗದ ಪುಷ್ಪಗಿರಿ ಪರ್ವತ ಶ್ರೇಣಿ ಅರೆ ನಿತ್ಯಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಅರಣ್ಯ ಭೂಮಿಯಲ್ಲಿ 3 ಮೆಗಾವ್ಯಾಟ್ ಸಾಮರ್ಥ್ಯದ ಬೀಡಲಿ ಮಿನಿ ಹೈಡೆಲ್ ಪ್ರಾಜೆಕ್ಟ್ ಅನ್ನು ಅನುಷ್ಠಾನಗೊಳಿಸಲು  ಮಂಜೂರಾತಿ ನೀಡಿತು. 
ಯೋಜನೆಗೆ ಕೊಡಗು ವಿಭಾಗ ಕಂಪನಿ ಎರಡು ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೂ, ಇದು ರಸ್ತೆ, ಕಟ್ಟಡ ಮತ್ತು ಪ್ರಸರಣ ಮಾರ್ಗವನ್ನು ಹೊರತುಪಡಿಸಿ 2.35 ಎಕರೆ ಹೆಚ್ಚು ಆಕ್ರಮಿಸಿಕೊಂಡಿದೆ ಎಂದು ವರದಿಯಾಗಿತ್ತು. ಇದರಿಂದಾಗಿ 2014 ರಲ್ಲಿ ಆರಂಭವಾದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.  ಅರಣ್ಯ ಪ್ರದೇಶ (ಅರಣ್ಯ ಸಂರಕ್ಷಣಾ) ಕಾಯ್ದೆ(ಎಫ್ಸಿಎ), 1980ರ ಅಡಿಯಲ್ಲಿ ಅರಣ್ಯ ಪ್ರದೇಶವನ್ನು ತಿರುಗಿಸಲು ಡಿಸಿಸಿ ಪ್ರಸ್ತಾಪವನ್ನು ಸಲ್ಲಿಸಿತ್ತು. ಈ ಯೋಜನೆಗೆ ಅಗತ್ಯ ಅನುಮೋದನೆ ಪಡೆಯುವ ತನಕ ಕೆಲಸ ನಿಲ್ಲಿಸಲು ಸೂಚಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT