ರಾಜ್ಯ

ಬೆಳಗಾವಿ: ಎರಡು ಗುಂಪುಗಳ ನಡುವೆ ಘರ್ಷಣೆ, ಕಲ್ಲು ತೂರಾಟ

Raghavendra Adiga
ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಪಕ್ಷಗಳ ಅಭ್ಯರ್ಥಿಗಳ ಪರ ವಿಜಯೋತ್ಸವ ಆಚರಿಸಿಕೊಳ್ಳುವ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ಬೆಳಗಾವಿಯಲಿ ನಡೆದಿದೆ. ಬೆಳಗಾವಿ ಕೋಟೆ ರಸ್ತೆಯಲ್ಲಿರುವ ಪ್ರಾರ್ಥನಾ ಮಂದಿರದ ಸಮೀಪ ಈ ಘರ್ಷಣೆ ನಡೆದಿದ್ದು ನಗರದಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲಗಳ ಪ್ರಕಾರ ತಮ್ಮ ಅಭ್ಯರ್ಥಿಯ ವಿಜಯದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಯುವಕರ ಗುಂಪೊಂದು ಇದ್ದಕ್ಕಿದ್ದಂತೆ ಪ್ರಾರ್ಥನಾ ಮಂದಿರಕ್ಕೆ ಕಲ್ಲು ತೂರಿದೆ. ಪಾಕಿಸ್ತಾನ ವಿರುದ್ಧ ಘೋಷಣೆ ಕೂಗುತ್ತಾ ಅವರು ಕಲ್ಲು ತೂರಾಟ ನಡೆಸಿದ್ದಾರೆ.
ಕಲ್ಲು ತೂರಾಟ ನಡೆದ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ನಗರದ ಅಲ್ಲಲ್ಲಿ ಘರ್ಷಣೆಗಳು ಪ್ರಾರಂಭವಾಗಿದೆ.ಕಸಾಯಿ ಗಲ್ಲಿ, ತಂಗಿನಕೆರೆ ಗಲ್ಲಿ, ಕಾಮತ್ ಗಲ್ಲಿ, ದರ್ಬಾರ್ ಗಲ್ಲಿ ಸೇರಿ ಕೆಲವೆಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ, ಕಲ್ಲು ತೂರಾಟ ಸಹ ನಡೆಇದ್ದೆ.
ಸಧ್ಯ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿಯನ್ನು ನಿಯತ್ರ್ಣದಲ್ಲಿಡಲು ಪ್ರಯತ್ನ ನಡೆಸಿದ್ದಾರೆ.
SCROLL FOR NEXT