ಬೆಂಗಳೂರು: ಜೂನ್ 4ಕ್ಕೆ 'ನಮ್ಮ ಮೆಟ್ರೋ' ಮುಷ್ಕರ 
ರಾಜ್ಯ

ಬೆಂಗಳೂರು: ಜೂನ್ 4ಕ್ಕೆ 'ನಮ್ಮ ಮೆಟ್ರೋ' ಮುಷ್ಕರ

ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಮೆಟ್ರೋ ನೌಕರರ ಸಂಘ ಜೂನ್ 4ಕ್ಕೆ ನಮ್ಮ ಮೆಟ್ರೋ ರೈಲು ಮುಷ್ಕರಕ್ಕೆ ಕರೆ ನೀಡಿದೆ.

ಬೆಂಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಮೆಟ್ರೋ ನೌಕರರ ಸಂಘ ಜೂನ್ 4ಕ್ಕೆ ನಮ್ಮ ಮೆಟ್ರೋ ರೈಲು ಮುಷ್ಕರಕ್ಕೆ ಕರೆ ನೀಡಿದೆ.
ಹೈಕೋರ್ಟ್ ಆದೇಶದ ಹೊರತಾಗಿಯ್ತೂ  ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (ಬಿಎಂಆರ್ ಸಿಎಲ್)  ಸಮಸ್ಯೆಯನ್ನು ಬಗೆಹರಿಸದ ಕಾರಣ ಮುಷ್ಕರ ಕೈಗೊಳ್ಳುವುದಾಗಿ ಮೆಟ್ರೋ ನೌಕರರು ಹೇಳಿದ್ದಾರೆ.
ವೇತನ ಪರಿಷ್ಕರಣೆ, ಹುದ್ದೆ ಖಾಯಮಾತಿ, ಭಾಷಾವಾರು ನೌಕರರ ನಡುವಿನ ತಾರತಮ್ಯ ತಡೆ ಸೇರಿ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಈ ಮುಷ್ಕರ ಆಯೋಜಿಸಲಾಗಿದೆ.
ತಿಂಗಳ ಹಿಂದೆಯೇ ಮುಷ್ಕರ ಕೈಗೊಳ್ಳಬೇಕೆಂದು ನಿರ್ಧರಿಸಿದ್ದ ಮೆಟ್ರೋ ರೈಲು ನೌಕರರ ಸಂಘ ಹೈಕೋರ್ಟ್ ಸೂಚನೆ ಮೇರೆಗೆ ಎರಡು ಬಾರಿ ಮುಷ್ಕರವನ್ನು ಮುಂದೂಡಿತ್ತು.
ಬಿಎಂಆರ್ ಸಿಎಲ್ ಹಾಗೂ ನೌಕರರ ನಡುವೆ ಯಾವ ಮಾತುಕತೆ ಫಲಪ್ರದವಾಗದ ಕಾರಣ ಇದೀಗ ಮತ್ತೆ ಮುಷ್ಕರ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೆಟ್ರೋ ನೌಕರರ ಸಂಘದ ಅಧ್ಯಕ್ಷ ಸೂರ್ಯನಾರಾಯಣ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT