ಸಂಜೀವ್ ಕುಮಾರ್ 
ರಾಜ್ಯ

ಮನಗೂಳಿಯ ವಿವಿ ಪ್ಯಾಟ್‍ಗಳಿಗೂ ರಾಜ್ಯ ಚುನಾವಣೆಗೂ ಸಂಬಂಧವಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

ವಿಜಯಪುರದ ಮನಗೂಳಿಯಲ್ಲಿ ಪತ್ತೆಯಾದ ವಿವಿ ಪ್ಯಾಟ್‍ಗಳು ರಾಜ್ಯ ಚುನಾವಣೆಗೆ ಬಳಸಿದ ವಿವಿ ಪ್ಯಾಟ್‍ಗಳಲ್ಲ ಅಲ್ಲದೆ ಇಲ್ಲಿ ಸಿಕ್ಕವುಗಳು ವಿವಿಪ್ಯಾಟ್ಖಾಲಿ ಬಾಕ್ಸ್ ಗಳು ಮಾತ್ರ....

ಬೆಂಗಳೂರು: ವಿಜಯಪುರದ ಮನಗೂಳಿಯಲ್ಲಿ ಪತ್ತೆಯಾದ ವಿವಿ ಪ್ಯಾಟ್‍ಗಳು ರಾಜ್ಯ ಚುನಾವಣೆಗೆ ಬಳಸಿದ ವಿವಿ ಪ್ಯಾಟ್‍ಗಳಲ್ಲ ಅಲ್ಲದೆ ಇಲ್ಲಿ ಸಿಕ್ಕವುಗಳು ವಿವಿಪ್ಯಾಟ್ಖಾಲಿ ಬಾಕ್ಸ್ ಗಳು ಮಾತ್ರ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್  ಹೇಳಿದ್ದಾರೆ.
ಮನಗೂಳಿಯ ಹೊರವಲಯದ ಶೆಡ್‍ವೊಂದರಲ್ಲಿ ವಿವಿ ಪ್ಯಾಟ್‍ಗಳು ಸಿಕ್ಕ ಪ್ರಕರಣ ಸಂಬಂಧ ಪ್ರತಿಕ್ರಿಒಯೆ ನಿಡಿದ ಆಯುಕ್ತರು ಮನಗೂಳಿ ಬಳಿಯ ಕಾರ್ಮಿಕರ ಜೋಪಡಿಯಲ್ಲಿ ದೊರೆತ ಯಂತ್ರಗಳಿಗೆ, ಆಯೋಗದ ಯಂತ್ರಗಳಿಗೆ ಯಾವ ಹೋಲಿಕೆಗಳಿಲ್ಲ. ವಿವಿಪ್ಯಾಟ್ ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಯಂತ್ರಗಳಿರಲಿಲ್ಲ. ಅವು ಚುನಾವಣೆಗೆ ಬಳಕೆಗೊಂಡ ವಿವಿಪ್ಯಾಟ್ ಆಗಿರಲಿಲ್ಲ.ಅದಾಗ್ಯೂ ಈ ಖಾಲಿ ಪೆಟ್ಟಿಗೆಗಳನ್ನು ರಸ್ತೆ ಬದಿಯಲ್ಲಿ ಎಸೆದವರಾರು ಎನ್ನುವ ಕುರಿತಂತೆ ತನಿಖೆ ಕೈಗೊಳ್ಳುತ್ತೇವೆ ಎಂದರು.
ಸಾರ್ವಜನಿಕರು ಈ ವಿಚಾರದ ಸಂಬಂಧ ಯಾವ ರೀತಿಯ ಊಹಾಪೋಹಗಳನ್ನು ಹರಡಬಾರದೆಂದು ಅವರು ಕಿವಿಮಾತು ಹೇಳಿದ್ದಾರೆ.
ವಿಜಯಪುರದ ಬಸವನವಾಗೇವಾಡಿಯ  ಮನಗೂಳಿಯಲ್ಲಿ ಎಂಟು ವಿವಿಪ್ಯಾಟ್ ಯಂತ್ರ)ಗಳು ಭಾನುವಾರ ಪತ್ತೆಯಾಗಿದ್ದು ಚುನಾವಣಾ ಅಕ್ರಮ ನಡೆದಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT