ಸಹಪಾಠಿಯಿಂದ ಟೆಕ್ಕಿಯ ಮೇಲೆ ಅತ್ಯಾಚಾರ; ಆರೋಪಿಯ ಬಂಧನ 
ರಾಜ್ಯ

ಬೆಂಗಳೂರು: ಸಹಪಾಠಿಯಿಂದ ಟೆಕ್ಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ

24 ವರ್ಷದ ಟೆಕ್ಕಿಯನ್ನು ಸಹಪಾಠಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ಬೆಂಗಳೂರು: 24 ವರ್ಷದ ಟೆಕ್ಕಿಯನ್ನು ಸಹಪಾಠಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ. 
ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಪಂಜಾಬ್ ಮೂಲದ ವ್ಯಕ್ತಿ ಈ ಕುಕೃತ್ಯ ಎಸಗಿದ್ದು, ಶಾಲೆಯಲ್ಲಿ ತನ್ನ ಕಿರಿಯ ಸಹಪಾಠಿಯಾಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ.  ಆರೋಪಿ ಪ್ರೌಢಶಾಲೆಯಲ್ಲಿ ನನ್ನ ಹಿರಿಯ ಸಹಪಾಠಿಯಾಗಿದ್ದರೂ ಹಲವು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ. ಆದರೆ ಇಬ್ಬರಿಗೂ ಸಾಮಾನ್ಯ ಸ್ನೇಹಿತರಾಗಿದ್ದವರ ವಿವಾಹದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಯುವತಿಯ ನಂಬರ್ ಪಡೆದಿದ್ದ ಆರೋಪಿ ದಿಲ್ದವೀಂದರ್ ಸಿಂಗ್(25) ಯುವತಿಯೊಂದಿಗೆ ವಾಟ್ಸ್ ಅಪ್ ನಲ್ಲಿ ಚಾಟ್ ಮಾಡುತ್ತಿದ್ದ. ತಾನು ಕೆಲಸ ಅರಸಿ ಬೆಂಗಳೂರಿಗೆ ಬರುವುದಾಗಿ ಯುವತಿಯ ಬಳಿ ಕೆಲವೇ ದಿನಗಳ ಹಿಂದೆ ತಿಳಿಸಿದ್ದ. ಅಂತೆಯೇ ಶುಕ್ರವಾರ (ಮೇ.25) ರಂದು ತಾನು ಬೆಂಗಳೂರಿಗೆ ಬಂದಿರುವುದಾಗಿ ದಿಲ್ದವೀಂದರ್ ಸಿಂಗ್ ಯುವತಿಯ ಬಳಿ ಹೇಳಿದ್ದಾನೆ. 
ಮೇ.25 ರಂದು ಸಂಜೆ ಇಬ್ಬರೂ ಇಂದಿರಾನಗರದಲ್ಲಿರುವ ರೆಸ್ಟೋರೆಂಟ್ ಗೆ ತೆರಳಿದ್ದೆವು. ಆದರೆ ರೆಸ್ಟೋರೆಂಟ್ ಭರ್ತಿಯಾಗಿದ್ದರಿಂದ ಕೋರಮಂಗಲಕ್ಕೆ ತೆರಳಿದೆವು. ಈ ವೇಳೆ ದಿಲ್ದವೀಂದರ್ ಸಿಂಗ್ ನ ಮತ್ತೋರ್ವ ಸ್ನೇಹಿತ ತುಷಾರ್ ಕೂಡ ಜೊತೆಯಾಗಿದ್ದ. ಮೂವರು ಅಲ್ಲಿಂದ ಹೊರಡಬೇಕಾದರೆ ಸಮಯ ಮಧ್ಯರಾತ್ರಿ 1 ಗಂಟೆಯಾಗಿತ್ತು. ಆದ್ದರಿಂದ ನಾನು ನಿನ್ನನ್ನು ಮನೆವರೆಗೂ ಬಿಡುತ್ತೇನೆ ಎಂದು ಬಂದ ದಿಲ್ದವೀಂದರ್ ಸಿಂಗ್ ನನ್ನ ಮೇಲೆ 3-4 ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಹೇಳಿದ್ದಾರೆ. 
ದೂರನ್ನು ಆಧರಿಸಿ ಪೊಲೀಸರು ದಿಲ್ದವೀಂದರ್ ಸಿಂಗ್ ನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿಯೂ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಸಾಬೀತಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ: ಏರ್ ಪೋರ್ಟ್ ನಲ್ಲಿ ಬಿಜೆಪಿ MLA ಬೈರತಿ ಬಸವರಾಜ್ ಬಂಧನ!

ಟಿ20 ವಿಶ್ವಕಪ್ 2026: ಇಶಾನ್, ಪಾಂಡ್ಯ ಅರ್ಧಶತಕ, ನಮೀಬಿಯಾಗೆ 210 ರನ್ ಗುರಿ ನೀಡಿದ ಭಾರತ! ಮಿಂಚಿದ ನಮೀಬಿಯಾ ನಾಯಕ Erasmus

ಟಿ20 ವಿಶ್ವಕಪ್ 2026: 6, 6, 6, 6, 4.. ಒಂದೇ ಓವರ್ ನಲ್ಲಿ 28 ರನ್, ದಾಖಲೆಗಳ ಮಳೆ, ಎಲೈಟ್ ಗ್ರೂಪ್ ಸೇರಿದ Ishan Kishan!

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ 'ಕೇಂದ್ರ' ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!

News wrap 12-02-2026| ನಾನು ರಾಜಕಾರಣ ಮಾಡೋಕೇ ದಿಲ್ಲಿಗೆ ಬಂದಿರೋದು- DKS; ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್; ಶಾಸಕ ಆರಗ ಜ್ಞಾನೇಂದ್ರ PA ಬಂಧನ

SCROLL FOR NEXT