ದಾಳಿಗೆ ಮೃತಪಟ್ಟ 57 ವರ್ಷದ ಆನೆ ರಾಜೇಶ್ 
ರಾಜ್ಯ

ಕಾಡಿನ ಆನೆ ದಾಳಿ: ಶಿಬಿರದ ಆನೆ ರಾಜೇಶ್ ಸಾವಿನ ಸುತ್ತ ಅನುಮಾನದ ಹುತ್ತ

ದಾಂಡೇಲಿ ಅರಣ್ಯದಲ್ಲಿ ಶಿಬಿರದ ಆನೆ ಸಾವಿಗೀಡಾಗಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಮುಖ ನಿರ್ಣಾಯಕ ಆವಾಸಸ್ಥಾನಗಳು ಮತ್ತು...

ಬೆಂಗಳೂರು: ದಾಂಡೇಲಿ ಅರಣ್ಯದಲ್ಲಿ ಶಿಬಿರದ ಆನೆ ಸಾವಿಗೀಡಾಗಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಮುಖ ನಿರ್ಣಾಯಕ ಆವಾಸಸ್ಥಾನಗಳು ಮತ್ತು ಈ ಪ್ರದೇಶದಲ್ಲಿ ಮೀಸಲಾದ ವನ್ಯಜೀವಿ ಪಶುವೈದ್ಯ ಆರೈಕೆಯ ಕೊರತೆಯ ಬಗ್ಗೆ ಈ ಪ್ರಕರಣ ಎತ್ತಿ ತೋರಿಸುತ್ತದೆ. ವನ್ಯ ಆನೆಯ ದಾಳಿಯಿಂದ ಶಿಬಿರದ ಆನೆ ಸಾವಿಗೀಡಾಗುವುದು ರಾಜ್ಯದಲ್ಲಿ ಇದು ಎರಡನೇ ಪ್ರಕರಣ. ಇದು ಶಿಬಿರದಲ್ಲಿ ಮೃಗಗಳಿಗೆ ಇರುವ ಭದ್ರತೆಯನ್ನು ಪ್ರಶ್ನೆ ಮಾಡುತ್ತದೆ.

ಕಾಳಿ ಹುಲಿ ಅಭಯಾರಣ್ಯದಲ್ಲಿ ಫನ್ಸೊಲಿ ರೇಂಜ್ ಅರಣ್ಯದಲ್ಲಿ ಎರಡು ಅರಣ್ಯ ಆನೆಗಳಿಂದ 57 ವರ್ಷದ ಶಿಬಿರ ಆನೆ ರಾಜೇಶ್ ಮೃತಪಟ್ಟಿದೆ. ಅರಣ್ಯದ ಆನೆಗಳೊಂದಿಗೆ ನಡೆದ ದಾಳಿಯಲ್ಲಿ ತಲೆಗೆ ತೀವ್ರ ಏಟಾಗಿ ಕಳೆದ ಸೋಮವಾರ ರಾತ್ರಿ ಆನೆ ಮೃತಪಟ್ಟಿತ್ತು. ರಾಜೇಶ ಆನೆಯನ್ನು ಸರಪಳಿಯಿಂದ ಕಟ್ಟಿಹಾಕಿದ್ದರಿಂದ ಹೋರಾಡಲು ಸಾಧ್ಯವಾಗದೆ ಮೃತಪಟ್ಟಿತ್ತು.
ಎರಡು ತಿಂಗಳ ಹಿಂದೆ ನಾಗರಹೊಳೆಯಲ್ಲಿ ಅರಣ್ಯದ ಆನೆಯ ದಾಳಿಯಿಂದ ಶಿಬಿರದ ಆನೆ ದಾಳಿಗೀಡಾಗಿ ಮೃತಪಟ್ಟಿತ್ತು.

ಶಿಬಿರದ ಆನೆಯನ್ನು ಅರಣ್ಯದಲ್ಲಿ ಕಟ್ಟಿಹಾಕಬಾರದಿತ್ತು. ಹುಲಿ ಅಭಯಾರಣ್ಯದಲ್ಲಿ ನಿಗದಿತ ವನ್ಯಮೃಗಗಳಿಂದ ರಕ್ಷಣೆ ಪಡೆಯುವ ವ್ಯವಸ್ಥೆಗಳಿಲ್ಲ. ವೈದ್ಯರು ಬೇಕೆಂದರೆ ಶಿವಮೊಗ್ಗದಿಂದ ಬರಿಸಬೇಕಿತ್ತು. ರಾಜೇಶ್ ನನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ದಾಂಡೇಲಿಯ ವನ್ಯಜೀವಿ ಕಾರ್ಯಕರ್ತ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT