ರಾಜ್ಯ

ಬಡವರಿಗೆ ಅಂಗಾಂಗ ಕಸಿ ಚಿಕಿತ್ಸೆಗೆ ಸರ್ಕಾರದಿಂದ ನೆರವು

Sumana Upadhyaya

ಬೆಂಗಳೂರು: ಬಡವರಿಗೆ ಅಂಗಾಂಗ ಕಸಿಯ ಅಗತ್ಯವುಳ್ಳವರಿಗೆ ನೆರವಾಗಲು ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ (ಎಸ್ಎಎಸ್ ಟಿ)ನಡಿ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಯೋಜನೆಯನ್ನು ಆರಂಭಿಸಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಇದು ಬರುತ್ತದೆ. ರಾಜ್ಯ ಸರ್ಕಾರವೇ ಇದರಲ್ಲಿ ಬಹುಪಾಲು ವೆಚ್ಚವನ್ನು ಭರಿಸಲಿದೆ.

ಕರ್ನಾಟಕದ ಅಂಗಾಣು ಕಸಿ ಪ್ರಾಧಿಕಾರ ಜೀವಸಾರ್ಥಕತೆ ಸಂಚಾಲಕ ಡಾ ಕಿಶೋರ್ ಫಡ್ಕೆ, ಕಿಡ್ನಿ ಮತ್ತು ಹೃದ್ರೋಗದ ಕೊನೆಯ ಹಂತದಲ್ಲಿದ್ದರೆ ಬದಲಿ ವ್ಯವಸ್ಥೆ ಇರುವುದಿಲ್ಲ, ಬದಲಿಗೆ ಕಸಿಯೊಂದೇ ಪರಿಹಾರ, ಹೀಗಾಗಿ ಬಡಜನತೆಗೆ ಸರ್ಕಾರದ ಉತ್ತಮ ಸೌಲಭ್ಯವಾಗಿದೆ ಎಂದರು.

SCROLL FOR NEXT