ರಾಜ್ಯ

ನಟ ವಿಜಯ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ !

Nagaraja AB

ಬೆಂಗಳೂರು: ಜೆಮ್ ಟ್ರೈನರ್ ಮಾರುತಿ ಗೌಡ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ  9 ದಿನಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದುನಿಯಾ ವಿಜಯ್ ಹಾಗೂ ಅವರ ನಾಲ್ವರು ಸಹಚರರು ಇಂದು ರಾತ್ರಿ  ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸೆಪ್ಟೆಂಬರ್ 23 ರಂದು ಜೈಲು ಸೇರಿದ ದುನಿಯಾ ವಿಜಯ್ ಹಾಗೂ ಸಹಚರರಿಗೆ  ಇಂದು ಮಧ್ಯಾಹ್ನ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರತಿ ದೊರೆತ ನಂತರ ಕಾರಾಗೃಹದಲ್ಲಿನ ಅಧಿಕಾರಿಗಳು ವಿಜಯ್ ಅವರನ್ನು ಬಿಡುಗಡೆಗೊಳಿಸಿದ್ದಾರೆ.
ಜೈಲಿನಿಂದ ಹೊರಬಂದ  ವಿಜಯ್  ಅವರನ್ನು ಜೈಲು ಆವರಣದಲ್ಲಿಯೇ ಇದ್ದ  ಎರಡನೇ ಪತ್ನಿ ಕೀರ್ತಿಗೌಡ ಮನೆಗೆ ಕರೆದುಕೊಂಡು ಹೋದರು.
SCROLL FOR NEXT