ಸಾಂದರ್ಭಿಕ ಚಿತ್ರ 
ರಾಜ್ಯ

ನಕಲಿ ಚಿನ್ನ ನಾಣ್ಯ ಕೊಟ್ಟು 1 ಲಕ್ಷ ರೂ.ಎಗರಿಸಿ ಐವರಿಗೆ ಪಂಗನಾಮ ಹಾಕಿದ ಭೂಪ!

ಅಪಹರಣಕಾರರು ಎಂದು ಶಂಕಿಸಿ ಶಿವಮೊಗ್ಗ ಜಿಲ್ಲೆಯ ಕೊಲ್ಲಾಪುರ್ ಗ್ರಾಮದ ನಿವಾಸಿಗಳು ಬೆಂಗಳೂರು ...

ಶಿವಮೊಗ್ಗ: ಅಪಹರಣಕಾರರು ಎಂದು ಶಂಕಿಸಿ ಶಿವಮೊಗ್ಗ ಜಿಲ್ಲೆಯ ಕೊಲ್ಲಾಪುರ್ ಗ್ರಾಮದ ನಿವಾಸಿಗಳು ಬೆಂಗಳೂರು ಮೂಲದ ಐವರು ಪುರುಷರನ್ನು ಹಿಡಿದು ರೂಮೊಂದರಲ್ಲಿ ನಿನ್ನೆ ಕೂಡಿ ಹಾಕಿದ ಘಟನೆ ನಡೆದಿದೆ. ಗ್ರಾಮಕ್ಕೆ ಏಕೆ ಬಂದಿರಿ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ಅಡಗಿಸಿಟ್ಟ ನಿಧಿಯನ್ನು ಹುಡುಕಲು ಬಂದಿರುವುದಾಗಿ ಹೇಳಿದರು.

ಐವರನ್ನು ಮೂರ್ತಿ, ಸತೀಶ್, ಅವಿನಾಶ್, ಅಶೋಕ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಪೊಲೀಸ್ ಸೂಪರಿಂಟೆಂಡ್ ಅಭಿನವ್ ಖಾರೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಮಂಜುನಾಥ್ ಎಂಬುವವನು ಚಿನ್ನದ ನಾಣ್ಯಕ್ಕೆ ಬದಲಾಗಿ ಅವರಿಂದ ಹಣ ಪಡೆದುಕೊಂಡಿದ್ದ. ಆದರೆ ಅದಕ್ಕೆ ಅವನು ನಕಲಿ ಚಿನ್ನದ ನಾಣ್ಯ ನೀಡಿದ್ದನು ಎಂದಿದ್ದಾರೆ.

ನಡೆದ ಘಟನೆಯೇನು?: ಮಂಜುನಾಥ್ ಮತ್ತು ಐವರು ಮೋಸ ಹೋದ ಪುರುಷರು ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿದ್ದರು. ಕಳೆದ ತಿಂಗಳು ಮಂಜುನಾಥ್ ಈ ಐವರಲ್ಲಿ ನನಗೊಂದು ನಿಧಿ ಸಿಕ್ಕಿದೆ, ಅದನ್ನು ರಹಸ್ಯವಾಗಿ ಮಾರಾಟ ಮಾಡಬೇಕೆಂದಿದ್ದೇನೆ ಎಂದರು. ಚಿನ್ನದ ನಾಣ್ಯ ನೋಡಲು ಶಿವಮೊಗ್ಗಕ್ಕೆ ಬನ್ನಿ ಎಂದು ಕರೆದಿದ್ದನು. ಅಶೋಕ್ ಎಂಬುವವನು ಬಂದಾಗ 9 ಗ್ರಾಮ್ ನ ಚಿನ್ನದ ನಾಣ್ಯ ತೋರಿಸಿದ್ದನು.

ಮಂಜುನಾಥ್ ನ ಮಾತನ್ನು ನಂಬಿ ಅಶೋಕ್ ಮತ್ತು ಇತರರು ಶಿವಮೊಗ್ಗಕ್ಕೆ ಬಂದು ಆರೋಪಿಯನ್ನು ಸಂಪರ್ಕಿಸಿದರು. ಕಲ್ಲಾಪುರಕ್ಕೆ ಬನ್ನಿ ಎಂದು ಮಂಜುನಾಥ್ ಐವರನ್ನೂ ಕರೆದನು. ಅವರು ಬಂದಾಗ ಅವರಿಂದ 1 ಲಕ್ಷ ರೂಪಾಯಿ ಪಡೆದು ಮುಚ್ಚಿದ ಬ್ಯಾಗನ್ನು ನೀಡಿದನು. ದೇವಸ್ಥಾನದ ಮುಂದೆ ತೆರೆಯಿರಿ ಎಂದು ಹೇಳಿ ಅಲ್ಲಿಂದ ಪರಾರಿಯಾದನು. ಬ್ಯಾಗನ್ನು ತೆರೆದು ನೋಡಿದರೆ ಅದರಲ್ಲಿ ಇದ್ದದ್ದು ನಕಲಿ ನಾಣ್ಯಗಳು.

ನಂತರ ಆರೋಪಿಯನ್ನು ಹುಡುಕಲು ಮೋಸ ಹೋದ ಐವರು ಗ್ರಾಮಕ್ಕೆ ಬಂದಿದ್ದರು. ಗ್ರಾಮಸ್ಥರು ಅವರನ್ನು ದೇವಸ್ಥಾನದ ಕೋಣೆಯೊಂದರಲ್ಲಿ ಕೂಡಿಹಾಕಿ ಪೊಲೀಸರಿಗೆ ತಿಳಿಸಿದರು. ಘಟನೆ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT