ರಾಜ್ಯ

ತುಮಕೂರು: ಮಾಜಿ ಮೇಯರ್ ಹತ್ಯೆ ಪ್ರಕರಣ ಮಾಸ್ಟರ್ ಮೈಂಡ್ ಪೊಲೀಸರಿಗೆ ಶರಣು

Shilpa D
ತುಮಕೂರು: ತುಮಕೂರಿನ ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ರ್ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ಹಾಗೂ ಆತನ ಸಹಚರರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
ಭಾನುವಾರ ಹತ್ಯೆ ಮಾಡಿದ ಬಳಿಕ ಆರೋಪಿಗಳು ಆಂಧ್ರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳು ಶರಣಾಗುವಲ್ಲಿ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರು ಸಹಾಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಮಾಜಿ ರೌಡಿ ಹಾಗೂ ಪತ್ರಕರ್ತ ಅಗ್ನಿ ಶ್ರೀಧರ್ ಕರುನಾಡ ಸೇನೆ ಸಂಘಟನೆ ಪುನರ್ ಸ್ಥಾಪಿಸುವ ವೇಳೆ ಸುಜಿ ಮುಂದಾಳತ್ವ ವಹಿಸಿದ್ದ.
ಆರೋಪಿಗಳು ಶರಣಾಗಿರುವ ವಿಷಯವನ್ನು ಎಸ್ ಪಿ ದಿವ್ಯಾ ವಿ. ಗೋಪಿನಾಥ್ ದೃಢ ಪಡಿಸಿದ್ದಾರೆ, ಈತನೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರಬಹುದು ಎಂದು ಶಂಕಿಸಲಾಗಿದೆ, ಆದರೆ ಘಟನೆ ನಡೆದ ಸ್ಥಳದಲ್ಲಿ ಆತ ಇರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
SCROLL FOR NEXT