ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ: ಮಂಗನ ಕೈಗೆ ಸ್ಟಿಯರಿಂಗ್ ಕೊಟ್ಟ ಚಾಲಕನ ಅಳಲು 
ರಾಜ್ಯ

ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ: ಮಂಗನ ಕೈಗೆ ಸ್ಟಿಯರಿಂಗ್ ಕೊಟ್ಟ ಚಾಲಕನ ಅಳಲು

ಘಟನೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಪ್ರಕಾಶ್, "ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ಕೋತಿಯೊಂದು ಚಾಲಕನೊಂದಿಗೆ ಸ್ಟಿಯರಿಂಗ್‌ ಮೇಲೆ ಕುಳಿತು ತಾನೂ ಡ್ರೈವಿಂಗ್‌ ಮಾಡಿದ್ದ ವಿಡಿಯೋ ಎಲ್ಲರಿಗೂ ನೆನಪಿರಲೇಬೇಕು. ನಂತರ ಅಧಿಕಾರಿಗಳು ಚಾಲನವ ವಿರುದ್ಧ ಕ್ರಮವನ್ನೂ ಕೈಗೊಂಡಿದ್ದರು. ಈಗ ಚಾಲಕ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನನ್ನದೇನು ತಪ್ಪಿಲ್ಲಾ ಎನ್ನುತ್ತಿದ್ದಾರೆ. 
ಘಟನೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಪ್ರಕಾಶ್, "ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 6 ಜನರಿರುವ ನನ್ನ ಕುಟುಂಬ ನನ್ನನ್ನು ಅಮಾನತುಗೊಳಿಸಿದ ಮೇಲೆ ಸಂಕಷ್ಟಕ್ಕೆ ಸಿಲುಕಿದೆ.  ಕಂಡೆಕ್ಟರ್ ಇದ್ದ ಕಡೆಯಿಂದ ಡ್ರೈವರ್ ಸೀಟ್ ನತ್ತ ಜಿಗಿದ ಮಂಗ ಏಕಾಏಕಿ ಸ್ಟಿಯರಿಂಗ್ ಮೇಲೆ ಕೂಳಿತುಕೊಂಡಿತು. ಅದನ್ನು ಓಡಿಸಲು ಯತ್ನಿಸಿದರೂ ಅಲ್ಲಿಂದ ಕದಲಲಿಲ್ಲ. ನಿರಂತರ 2 ಕಿ.ಮೀ ದೂರ ಅಲ್ಲೇ ಕುಳಿತಿದ್ದ ಮಂಗ ನಂತರ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಮೇಲೆ ಹಾರಿತು. ಪ್ರಾರಂಭದಲ್ಲಿ ನನಗೂ ಹೆದರಿಕೆ ಆಗಿತ್ತು" ಎಂದು ಹೇಳಿದ್ದಾರೆ. 
11 ವರ್ಷಗಳ ವೃತ್ತಿ ಜೀವನದಲ್ಲಿ ಪ್ರಕಾಶ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಈಗ ತನ್ನದಲ್ಲದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎನ್ನುತ್ತಿರುವ ಪ್ರಕಾಶ್ ಬಡತನದ ಹಿನ್ನೆಲೆ ಹೊಂದಿದ್ದಾರೆ. ಪ್ರಕಾಶ್ ಅವರ ಬೆಂಬಲಕ್ಕೆ ಪ್ರಯಾಣಿಕರೂ ಸಹ ಧಾವಿಸಿದ್ದು, ಪ್ರಕಾಶ್ ಅವರ ತಪ್ಪು ಇಲ್ಲ ಎಂದಿದ್ದಾರೆ.  ಮಂಗ ಸ್ಟಿಯರಿಂಗ್ ಮೇಲೆ ಕೂತಿದ್ದ ಘಟನೆ ಆಕಸ್ಮಿಕವಾದದ್ದು ಪ್ರಕಾಶ್ ಉತ್ತಮ ಚಾಲಕ, ಆತನ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ಪ್ರತಿ ದಿನ ಬಸ್ ನಲ್ಲಿ ಪ್ರಯಾಣಿಸುವ ತಿಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT