ಬೆಂಗಳೂರು: ವೀರ ವನಿತೆ ಮಹಾದೇವಿ ಕನ್ನಡ ಸಿನಿಮಾದಲ್ಲಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ನಟಿಸುತ್ತಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಮೌರ್ಯ ವೃತ್ತದಲ್ಲಿ ನಿನ್ನೆ ನಟಿ ಸನ್ನಿ ಲಿಯೋನ್ ಪ್ರತಿಕೃತಿ ದಹಿಸುವ ಮೂಲಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಕೂಟ ಅಮೋಘವರ್ಷ ನೃಪತುಂಬ ಅವರ ಜೀವನ ಆಧರಿಸಿದ ಚಿತ್ರವು 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇಂತಹ ಸಿನಿಮಾದಲ್ಲಿ ನೀಲಿ ಚಿತ್ರಗಳ ತಾರೆ ಅಭಿನಯಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.