ಐಐಟಿ ಸೂಪರ್‏ಗ್ರೂಪ್ ವರ್ಕ್‏ಶಾಪ್ 
ರಾಜ್ಯ

ಬೆಂಗಳೂರು: ಐಐಟಿ ಸೂಪರ್‏ಗ್ರೂಪ್ ವರ್ಕ್‏ಶಾಪ್ ಆಯೋಜನೆ

ಐಐಟಿ ಸೂಪರ್‏ಗ್ರೂಪ್ ನವರಿಂದ ಬಹುನಿರೀಕ್ಷಿತ ವರ್ಕ್‏ಶಾಪ್ ನಗರದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಭಾನುವಾರ ಪ್ರಾರಂಭವಾಯಿತು.

ಬೆಂಗಳೂರು: ಐಐಟಿ ಸೂಪರ್‏ಗ್ರೂಪ್ ನವರಿಂದ ಬಹುನಿರೀಕ್ಷಿತ ವರ್ಕ್‏ಶಾಪ್ ನಗರದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಭಾನುವಾರ ಪ್ರಾರಂಭವಾಯಿತು.

ಐಐಟಿ-ಖಾರಗ್ಪುರದ ವಿದ್ಯಾರ್ಥಿಯಾಗಿದ್ದ ಯಶಸ್ವಿ ಕುಮಾರ್ ಅವರು ಪ್ರಮುಖ ಭಾಷಣಕಾರರಾಗಿ 'ಐಐಟಿ ಆರ್ ನಥಿಂಗ್' ವಿಷಯದ ಬಗ್ಗೆ ಮಾತನಾಡಿದರು. ಉನ್ನತ ಐಐಟಿಗಳಾದ್ಯಂತ ಸಾಧನೆ ಮಾಡಿದ ಜೆಇಇ ತರಬೇತುದಾರರನ್ನು ಒಳಗೊಂಡ ತಂಡವನ್ನು ಪರಿಚಯಿಸುವ ಮೂಲಕ ಅವರು ಸೆಶನ್ ಪ್ರಾರಂಭಿಸಿದರು ಮತ್ತು ಐಐಟಿ ಜೆಇಇ ಯಲ್ಲಿ ಟಾಪ್ 1000 ಶ್ರೇಯಾಂಕದಲ್ಲಿ ಸ್ಥಾನ ಪಡೆಯಲು ಅವರಿಗೆ ಸಹಾಯ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ಮಾರ್ಟ್ ಕಲಿಕೆ ಮತ್ತು ಸರಿಯಾದ ಫಲಿತಾಂಶಗಳನ್ನು ಉಂಟುಮಾಡುವ ಸರಿಯಾದ ಅಭ್ಯಾಸಗಳನ್ನು ಮೂಡಿಸುವ ಕುರಿತು ಅವರು ಮಾತನಾಡಿದರು.

ಕಲಿಕೆಯ ಒಂದು ಆಯಾಮದ ರಚನೆಯಡಿಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಡೆಗಟ್ಟುವಂತಹ ನಿರೀಕ್ಷಿತ ಮಾರ್ಗಗಳ ಬಗ್ಗೆ ಚಿಂತನೆ ಮಾಡುವಂತೆ ತರಬೇತಿ ಪಡೆಯುತ್ತಾರೆ. ರೋಟ್ ಕಲಿಕೆಯಲ್ಲಿ ಹೆಚ್ಚು ಪ್ರಾಯೋಗಿಕ ಕಲಿಕೆಯ ವಿಧಾನಕ್ಕಾಗಿ ಅವರು ಸಲಹೆ ನೀಡಿದರು. ತಮ್ಮದೇ ವಿದ್ಯಾರ್ಥಿಗಳ ಅನೇಕ ಅಧ್ಯಯನಗಳನ್ನು ಬಳಸಿ, ಪ್ರತಿ ವಿದ್ಯಾರ್ಥಿಯೂ ತನ್ನ ಗುರು ಮುಟ್ಟಲು ಒಂದು ಅನನ್ಯ ಮಾರ್ಗವನ್ನು ಹೊಂದಿರುತ್ತಾರೆ ಎಂದು ಅವರು ಹೈಲೈಟ್ ಮಾಡಿದರು.

ನಂತರ ಅವರು ಜೆಇಇಗೆ ಐಐಟಿ ಸೂಪರ್ ಗ್ರೂಪ್ನ ಎರಡು ವರ್ಷದ ಮಾರ್ಗದರ್ಶಿಯನ್ನು ಅನಾವರಣಗೊಳಿಸಿದರು. ಅದು ತರಗತಿಯ ಉಪನ್ಯಾಸಗಳು, ಅಧ್ಯಯನ ಸಾಮಗ್ರಿಗಳು, ಅಣಕು ಪರೀಕ್ಷೆಗಳು, ವಿದ್ಯಾರ್ಥಿಗಳ ದಕ್ಷತೆಯನ್ನು ಸುಧಾರಿಸುವ ಪ್ರಶ್ನೆ ಮಾದರಿಗಳನ್ನು ಹೊಂದಿರುತ್ತದೆ ಮತ್ತು ಒಂದು ಉನ್ನತ ಜೆಇಇ ಶ್ರೇಣಿಗೆ ರಚನಾತ್ಮಕ ಮಾರ್ಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಸರಿಯಾದ ಮಾರ್ಗದರ್ಶನದಿಂದ, ಪ್ರತಿ ವಿದ್ಯಾರ್ಥಿಯು ತಮ್ಮ ಆಯ್ಕೆಯ ಐಐಟಿ ಪಡೆಯಬಹುದು ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಜನ ಭಾಗವಹಿಸಿದ್ದರು. ಅವುರಲ್ಲಿ ಹೆಚ್ಚಿನವರು ಹತ್ತನೇ ಕ್ಲಾಸ್ ವಿದ್ಯಾರ್ಥಿಗಳಾಗಿದ್ದು, ಅವರಲ್ಲಿ ಹೆಚ್ಚಿನವರು ಅವರ ಪೋಷಕರ ಜೊತೆಗೂಡಿ ಬಂದಿದ್ದರು. ಸೆಶನ್ ನ ಕೊನೆಯಲ್ಲಿ ಕ್ಲಾಸ್ 10 ಬೋರ್ಡ್ ವಿದ್ಯಾರ್ಥಿಗಳಿಗೆ ಉಚಿತ ಕ್ರ್ಯಾಶ್ ಕೋರ್ಸ್ ಅನ್ನು ಘೋಷಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT