ಎಸ್.ಬಿ ವಸ್ತ್ರಮಠ್ 
ರಾಜ್ಯ

ಚಿತ್ರದುರ್ಗ: 22 ದಿನಗಳಲ್ಲಿ 153 ಪ್ರಕರಣಗಳಿಗೆ ತೀರ್ಪು ನೀಡಿದ ನ್ಯಾಯಮೂರ್ತಿ ಎಸ್ ಬಿ ವಸ್ತ್ರಮಠ್

ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶ ಎಸ್ ಬಿ ವಸ್ತ್ರಮಠ್ ಮತ್ತೆ ತ್ವರಿತಗತಿಲ್ಲಿ ಪ್ರಕರಣಗಳ ಇತ್ಯರ್ಥ ಮಾಡಿ ತೀರ್ಪು ನೀಡಿದ್ದಾರೆ, ಸೆಪ್ಟಂಬರ್ ತಿಂಗಳ 22 ದಿನಗಳಲ್ಲಿ ...

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ  ನ್ಯಾಯಾಧೀಶ ಎಸ್ ಬಿ ವಸ್ತ್ರಮಠ್ ಮತ್ತೆ ತ್ವರಿತಗತಿಲ್ಲಿ ಪ್ರಕರಣಗಳ ಇತ್ಯರ್ಥ ಮಾಡಿ ತೀರ್ಪು ನೀಡಿದ್ದಾರೆ, ಸೆಪ್ಟಂಬರ್ ತಿಂಗಳ 22 ದಿನಗಳಲ್ಲಿ ಬರೋಬ್ಬರಿ 153 ಪ್ರಕರಣಗಳಿಗೆ ತೀರ್ಪು ಕೊಟ್ಟಿದ್ದಾರೆ., ಇದರಲ್ಲಿ ಕಳ್ಳತನ, ಚೆಕ್ ಬೌನ್ಸ್ ಸೇರಿದಂತೆ ಹಲವು ಸಣ್ಣಪುಟ್ಟ ಪ್ರಕರಣಗಳು ಸೇರಿದ್ದವು.
ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವುದರ ಮೂಲಕ 54 ವರ್ಷದ ನ್ಯಾಯಾಧೀಶರು ಎಲ್ಲರ ಹೃದಯ ಗೆದ್ದಿದ್ದಾರೆ, ಜುಲೈ ತಿಂಗಳಲ್ಲಿ ಕೂಡ 11 ದಿನಗಳಲ್ಲಿ ಹಲವು ಪ್ರಕರಣಗಳ ತೀರ್ಪು ನೀಡಿದ್ದರು. ಸೆಪ್ಟಂಬರ್ ತಿಂಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ,ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ನೀಡಿದ್ದಾರೆ,
ಮೊಳಕಾಲ್ಮೂರು ವಿಭಾಗದಲ್ಲಿ  ತಿಂಗಳ ಸಿಂಗಲ್ ಕ್ಯಾಲೆಂಡರ್ ನಲ್ಲಿ 10 ಪಾಯಿಂಟ್ ಗಳಿಗೆ ಗರಿಷ್ಠ 70 ಪಾಯಿಂಟ್ ಗಳಿಸಿದ್ದಾರೆ, ಪ್ರತಿ ಜಡ್ಜ್ ಮೆಂಟ್ ಗೆ 10 ಪಾಯಿಂಟ್ ನೀಡಲಾಗುತ್ತದೆ. 
ಜುಲೈ ತಿಂಗಳ 7ನೇ ತಾರೀಖಿನಂದು ನ್ಯಾಯಾಧೀಶರು. ತನ್ನ ಪತ್ನಿಯನ್ನೇ ಕೊಂದಿದ್ದ ಪರಮೇಶ್ವರ್ ಸ್ವಾಮಿ ಎಂಬಾತನಿಗೆ 11 ದಿನದದ್ದೇ ಜೀವಾವಧಿ ಶಿಕ್ಷೆ ವಿಧಿಸಿದ್ದರು, ಮತ್ತೊಂದು ಪ್ರಕಣರಣದಲ್ಲಿ ಹೆಂಡತಿಯನ್ನು ಕೊಂದಿದ್ದ  ಶ್ರೀಧರ್ ಎಂಬ ವ್ಯಕ್ತಿಗೆ ಅಪರಾಧ ನಡೆದ 13 ದಿನಗಳಲ್ಲೇ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. 
ಕೃಷಿಕ ಮನೆತನದಿಂದ ಬಂದಿರುವ ವಸ್ತ್ರಮಠ್ ಹಾವೇರಿಯ ಸಿದ್ದಾಪುರ ಗ್ರಾಮದವರು, ತಮ್ಮ ಪಿಯುಸಿ ಯನ್ನು ಹಾವೇರಿಯಲ್ಲಿ ಮುಗಿಸಿ, ಧಾರಾವಾಡದ ಮೃತ್ಯುಂಜಯ ಕಾಮರ್ಸ್ ಕಾಲೇಜಿನಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡಿದ್ದಾರೆ, 1989 ರಲ್ಲಿ ಕಾನೂನು ಪದವಿ ಪೂರೈಸಿದ ನಂತರ ಜ್ಯೂಡಿಷಿಯಲ್ ಸರ್ವೀಸ್ ಪರೀಕ್ಷೆ ಬರೆದು ಮ್ಯಾಜಿಸ್ಟ್ರೇಟ್ ಆಗಿ ನೇಮಕವಾದರು.
2017 ರಲ್ಲಿ ಮೊಳಕಾಲ್ಮೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ  ಮೃತಪಟ್ಟ ಕುಟುಂಬಸ್ಥರಿಗೂ 1.14 ಕೋಟಿ ರು ಪರಿಹಾರ ಹಣವನ್ನು 18 ದಿನಗಳಲ್ಲಿ ಕೊಡಿಸಿದ ದಾಖಲೆ ವಸ್ತ್ರಮಟ್ ಅವರದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT