ರಾಜ್ಯ

ಸಿಎಂ ಕುಮಾರಸ್ವಾಮಿ ನೀಡಿದ್ದ ಅಧಿಕಾರಿ ವರ್ಗಾವಣೆ ಆದೇಶಕ್ಕೆ ಸಚಿವ ಎನ್. ಶಂಕರ್ ತಡೆ!

Shilpa D
ಬೆಂಗಳೂರು: ಅರಣ್ಯ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿಡಿದ್ದ ಆದೇಶವನ್ನು ಅರಣ್.ಸಚಿವ ಆರ್. ಶಂಕರ್ ತಡೆಹಿಡಿದಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ವಿಭಾಗದ ಸಹಾಯಕ ಅರಣ್ಯಾಧಿಕಾರಿ ರವೀಂದ್ರ ಕುಮಾರ್ ಅವರನ್ನ ವರ್ಗಾವಣೆ ಮಾಡಿ ಅಕ್ಟೋಬರ್  5ರಂದು ಆದೇಶ ಹೊರಡಿಸಿದ್ದರು, ಆದರೆ ಮಧ್ಯ ಪ್ರವೇಶಿಸಿದ ಸಚಿವ ಶಂಕರ್, ವರ್ಗಾವಣೆ ಆದೇಶವನ್ನು ತಡೆ ಹಿಡಿಯೂಬೇಕೆಂದು ಇಲಾಖೆಯ ಉನ್ನತ ಅಧಿಕಾರಗಿಳಿಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ. 
ಬೆಂಗಳೂರು ದಕ್ಷಿಣ ವಿಭಾಗದ ಸುಂಕದಕಟ್ಟೆ ಸರ್ವೆ ನಂ 37 ರಲ್ಲಿ  ರವೀದ್ರ ಕುಮಾರ್ ಸುಮಾರು 130 ಎಕೆರೆ ಜಾಗವನ್ನು ವಶ ಪಡಿಸಿಕೊಂಡಿದ್ದರು. ಹೀಗಾಗಿ ಕೆಲವು ಶಾಸಕರು ಅವರನ್ನು ವರ್ಗಾವಣೆ ಮಾಡುವಂತೆ ಸಿಎಂ ಕುಮಾರ ಸ್ವಾಮಿ ಅವರಿಗೆ ಒತ್ತಾಯಿಸಿದ್ದರು, ಆದರೆ ರವೀಂದ್ರ ಕುಮಾರ್ ಅವರನ್ನು ವರ್ಗಾವಣೆ ಮಾಡುವುದು ಬೇಡ ಎಂದು ಸಚಿವರು ತಡೆ ಹಿಡಿದಿದ್ದಾರೆ,  ಇದರಲ್ಲಿ ಹೆಚ್ಚಿನ ರಾಜಕೀಯ  ಒತ್ತಡವಿದ್ದು, ಮುಂದಿನ ಆದೇಶ ಬರುವವರೆಗೂ ರವಿಂದ್ರ ಕುಮಾರ್ ಸದ್ಯ ಇರುವ ಹುದ್ದೆಯಲ್ಲಿಯೇ ಬೆಂಗಳೂರಿನಲ್ಲಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ,
ರವೀಂದ್ರ ಕುಮಾರ್ ವಶ ಪಡಿಸಿಕೊಂಡಿದ್ದ ಜಮೀನು ಕೆಲ ರಾಜಕಾರಣೆಗಳ ವ್ಯವಹಾರಕ್ಕೆ ಸಮಸ್ಯೆ ಉಂಟಾಗಿತ್ತು, ಹೀಗಾಗಿ ಕೆಲವರು ಅವರನ್ನು ವರ್ಗಾವಣೆ ಮಾಡಬೇಕೆಂದು ಕೋರಿದ್ದರು. 
SCROLL FOR NEXT