ರಾಜ್ಯ

ದಾವಣಗೆರೆ: ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಮಹಿಳೆಯಿಂದ ಚಪ್ಪಲಿ ಸೇವೆ!

Raghavendra Adiga
ದಾವಣಗೆರೆ: ಸಾಲ ಕೊಡುವುದಾಗಿ ನಂಬಿಸಿ ಮಂಚಕ್ಕೆ ಆಹ್ವಾನಿಸಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬನಿಗೆ ಮಹಿಳೆಯು ಚಪ್ಪಲಿ, ಪೊರಕೆಯಿಂದ ಹೊಡೆದು ಬುದ್ದಿ ಹೇಳಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಖಾಸಗಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ದೇವಣ್ಣ ಎಂಬಾತನೇ ಮಹಿಳೆಯಿಂದ ಏಟು ತಿಂದ ಆಸಾಮಿ. ದಾವಣಗೆರೆ ನಗರ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದ ಘಟನೆಯಲ್ಲಿ ಮಹಿಳೆಯಿಂದ ಏಟು ತಿಂದ ಮ್ಯಾನೇಜರ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಸಾಲ ಪಡೆಯಲು ಬ್ಯಾಂಕ್ ಗೆ ತೆರಳಿದ್ದ ಮಹಿಳೆಗೆ ತಾನು ಸಾಲ ನೀಡಬೇಕಾದರೆ ಮಂಚಕ್ಕೆ ಬಾ ಎಂದು ಆಹ್ವಾನಿಸಿದ್ದಾರೆ. ಇದರಿಂದ ಕ್ರೋಧಿತಳಾದ ಮಹಿಳೆ ನಡುರಸ್ತೆಯಲ್ಲೇ ಮ್ಯಾನೇಜರ್ ಗೆ ಚಪ್ಪಲಿ ಸೇವೆ ನಡೆಸಿ ಸರಿಯಾದ ಪಾಠ ಕಲಿಸಿದ್ದಾಳೆ.
ದಾವಣಗೆರೆ ನಗರ ಮಹಿಳಾ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
SCROLL FOR NEXT