ಸಾಂದರ್ಭಿಕ ಚಿತ್ರ 
ರಾಜ್ಯ

ಬಿಯರ್ ಪ್ರಿಯರಿಗೆ ಕಹಿ ಸುದ್ದಿ; ಬೆಂಗಳೂರಿನಲ್ಲಿ ಪೂರೈಕೆ ಕೊರತೆ

ನಗರದ ಬಿಯರ್ ಪ್ರಿಯರಿಗೆ ಕಹಿ ಸುದ್ದಿಯಿದೆ. ಬಿಯರ್ ಬೇಕೆಂದು ...

ಬೆಂಗಳೂರು: ನಗರದ ಬಿಯರ್ ಪ್ರಿಯರಿಗೆ ಕಹಿ ಸುದ್ದಿಯಿದೆ. ಬಿಯರ್ ಬೇಕೆಂದು ಮಳಿಗೆಗಳಿಗೆ ಹೋದರೆ ಹಲವೆಡೆ ಖಾಲಿಯಾಗಿದೆಯೆಂದು ಬರಿಗೈಯಲ್ಲಿ ಹಿಂತಿರುಗಬೇಕಾದ ಪರಿಸ್ಥಿತಿಯಿದೆ.

ಭಾರತದಲ್ಲಿ ತಯಾರಾಗುವ ಮದ್ಯಗಳ ಮಾರಾಟಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುವುದು ಮದ್ಯ ಪೂರೈಕೆಯಲ್ಲಿ ಕೊರತೆಗೆ ಕಾರಣ ಎಂದು ನಗರದ ಮದ್ಯ ಮಾರಾಟ ಮಾಡುವ ಮಾಲೀಕರು ಹೇಳುತ್ತಾರೆ. ಭಾರತದಲ್ಲಿ ತಯಾರಿಸುವ ಲಿಕ್ಕರ್ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವುದರಿಂದ ಸರ್ಕಾರ ಅದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ರೈತರ ಸಾಲ ಮನ್ನಾ ಮಾಡಿರುವುದರಿಂದ ಸರ್ಕಾರಕ್ಕೆ ಬೇರೆ ಮೂಲಗಳಿಂದ ಆದಾಯ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಎಂಆರ್ ಪಿ ದರದಲ್ಲಿ ಬಿಯರ್ ಸಿಗುವ ಔಟ್ ಲೆಟ್ ಗಳಲ್ಲಿ ಬೀರ್ ಸಿಗುವುದು ಕಷ್ಟವಾಗಿದೆ. ಅನೇಕ ಬಿಯರ್ ಬ್ರಾಂಡ್ ಗಳು ಕಳೆದ 8-10 ದಿನಗಳಿಂದ ಸಿಗುತ್ತಿಲ್ಲ. ಲಿಕ್ಕರ್ ಡಿಪೊದಿಂದ ಸಾಕಷ್ಟು ಬಿಯರ್ ಗಳು ಸಿಗುತ್ತಿಲ್ಲ ಎಂದು ಮಳಿಗೆಗಳ ಮಾಲೀಕರು ಹೇಳುತ್ತಾರೆ ಎನ್ನುತ್ತಾರೆ ಇಂದಿರಾನಗರ ನಿವಾಸಿ ಕೆವಿನ್ ಮೆನೆಝಸ್.

ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ. ಸಾಲುಸಾಲು ರಜೆ ಬಂದಿರುವುದರಿಂದ ಖರೀದಿದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಬಿಯರ್ ಕೊರತೆಯುಂಟಾಗಿರಬಹುದು. ಸದ್ಯದಲ್ಲಿಯೇ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎಂದರು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಾಜ್ಯ ವೈನ್ ವ್ಯಾಪಾರಿಗಳ ಸಂಘಟನೆ ಪದಾಧಿಕಾರಿ, ಅಬಕಾರಿ ಡಿಪೊಗಳಿಂದ ಮಳಿಗೆಗಳಿಗೆ ಸಾಕಷ್ಟು ಮದ್ಯದ ಬಾಟಲಿಗಳು ಪೂರೈಕೆಯಾಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲು ಲಿಕ್ಕರ್ ಗಳ ಮಾರಾಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT