ರಾಜ್ಯ

ಮೈಸೂರು ಅರಮನೆಗೆ ಆಗಮಿಸಿದ ದಸರಾ ಗಜಪಡೆ: ಸಾಂಪ್ರದಾಯಿಕ ಸ್ವಾಗತ

Shilpa D
ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗಜಪಡೆಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. 
ನಾಗರಹೊಳೆ ಅರಣ್ಯ ಪ್ರದೇಶದ ವೀರನಹೊಸಳ್ಳಿಯಿಂದ ಅಂಬಾರಿ ಆನೆ ಅರ್ಜುನ ಸೇರಿದಂತೆ ಒಟ್ಟು 5 ಆನೆಗಳು ನಗರಕ್ಕೆ ಭಾನುವಾರ ಆಗಮಿಸಿದ್ದು, ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಬೀಡು ಬಿಟ್ಟಿದ್ದವು. ಅಲ್ಲಿಂದ ಮೂರು ಕಿಮೀ. ದೂರ ಸಂಜೆ 4 ರಿಂದ ಮೆರವಣಿಗೆ ಮೂಲಕ ಅರಮನೆ ಜಯಮಾರ್ತಾಂಡ ಹೆಬ್ಬಾಗಿಲ ಬಳಿ ಆನೆಗಳನ್ನು ಕರೆತರಲಾಯಿತು. 
ವರಲಕ್ಷ್ಮಿ, ಗೋಪಿ, ವಿಕ್ರಮ, ಧನಂಜಯ ಮತ್ತು ಚೈತ್ರ ಆನೆಗಳು ಅಂಬಾರಿ ಹೊರುವ ಅರ್ಜುನನ ಜೊತೆ ಅರಮನೆಗೆ ಬಂದಿವೆ, ಮತ್ತೊಂದು ತಂಡದಲ್ಲಿ ಉಳಿದ ಆರು ಆನೆಗಳು ಶೀಘ್ರವೇ ಮೈಸೂರಿಗೆ ಬರಲಿವೆ
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಲಂಕೃತ ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಕಬ್ಬು ತಿನ್ನಿಸುವ ಮೂಲಕ ಗಜಪಡೆಯನ್ನು ಬರಮಾಡಿಕೊಂಡರು. ಸಶಸ್ತ್ರ ಪೊಲೀಸ್‌ ಪಡೆ ಹಾಗೂ ಅಶ್ವಾರೋಹಿ ಪೊಲೀಸ್‌ ಪಡೆಗಳು ಗೌರವ ವಂದನೆ ಸಲ್ಲಿಸಿದವು. 
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್‌ ಅವರ ನೇತೃತ್ವದಲ್ಲಿ ಗಜಪೂಜೆ ಸೇರಿದಂತೆ ನಾನಾ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. 
SCROLL FOR NEXT