ಬಿತರಿಯಾನಿ -ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಚಿಕನ್ ಬಿರಿಯಾನಿ ತಿಂದರೆಂದು ಪತಿ, ಮಗನನ್ನೇ ತೊರೆದು ಹೋದ ಗರ್ಭಿಣಿ ಮಹಿಳೆ

ಪತಿ ಮತ್ತು ಎಂಟು ವರ್ಷದ ಮಗ ಬಿರಿಯಾನಿ ತಿಂದರೆನ್ನುವ ಕಾರಣಕ್ಕೆ 31 ವರ್ಷದ ಗರ್ಭಿಣಿ ಮಹಿಳೆ ಮನೆ ತೊರೆದು ಹೋಗಿರುವ ವಿಚಿತ್ರ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಪತಿ ಮತ್ತು ಎಂಟು ವರ್ಷದ ಮಗ ಬಿರಿಯಾನಿ ತಿಂದರೆನ್ನುವ ಕಾರಣಕ್ಕೆ 31 ವರ್ಷದ ಗರ್ಭಿಣಿ ಮಹಿಳೆ ಮನೆ ತೊರೆದು ಹೋಗಿರುವ ವಿಚಿತ್ರ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.
ತಾನಿನ್ನು ಎಂದೂ ಹಿಂತಿರುಗುವುದಿಲ್ಲ ಎಂದು ಹೇಳಿ ಆಕೆ ತವರಿಗೆ ಹೊರಟು ಹೋಗಿದ್ದಾಳೆ. ಈ ಸಂಬಂಧ ಮಧ್ಯಪ್ರದೇಶದ ಸತ್ನಾ ಮೂಲದ ಅನಿತಾ ಸರ್ಕಾರ್ ವಿರುದ್ದ ಆಕೆಯ ಪತಿ ರಾಜು ಗಂಗಮ್ಮನಗುಡಿ ಪೋಲೀಸರಿಗೆ ದೂರಿತ್ತಿದ್ದಾರೆ.
ಘಟನೆ ವಿವರ
ಆಗಸ್ಟ್ 28 ರಂದು ರಾಜು ಹತ್ತಿರದ ಹೋಟೆಲ್ ಒಂದರಿಂದ ಚಿಕನ್ ಬಿರಿಯಾನಿಯನ್ನು ಪಾರ್ಸಲ್ ತಂದಿದ್ದರು. ಅವರು ತಮ್ಮ ಚಿಕ್ಕ ಮಗ ಆದರ್ಶ್ ನೊಡನೆ ಅದನ್ನು ತಿನ್ನುವಾಗ ಅನಿತಾ ತಾನು ಬಿರಿಯಾನಿ ವಾಸನೆ ಸಹಿಸಲ್ಲ ಎಂದು ಜಗಳವಾಡಿದ್ದಾಳೆ. ಅಲ್ಲದೆ ತಾನು ಇನ್ನು ಮುಂದೆ ಎಂದಿಗೂ ಮನೆಯಲ್ಲಿ ಅಡಿಗೆ ಮಾಡಲಾರೆ ಎಂದು ಪಟ್ಟು ಹಿಡಿದಿದ್ದಾಳೆ. ಇದಾಗಿ ಪತಿ ರಾಜು ಕೆಲಸಕ್ಕೆ ತೆರಳಿದ್ದಾಗ ಆಕೆ ತಾನು ಮನೆ ತೊರೆದು ಹೋಗಿದ್ದಾಳೆ ಎಂದು ಪೋಲೀಸರು ಹೇಳಿದರು.
ಪತ್ನಿಯನ್ನು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಿದ ಬಳಿಕ ರಾಜು ಪೋಲೀಸರಿಗೆ ದೂರಿತ್ತಿದ್ದಾರೆ. ಗುರುವಾರ ಮಧ್ಯಪ್ರದೇಶದ ಸತ್ನಾದಲ್ಲಿನ ಆಕೆಯ ತವರು ಮನೆಗೆ ಕರ್ರೆ ಮಾಡಲಾಗಿ ಅನಿತಾ ತನ್ನ ಪೋಷಕರೊಡನೆ ಇದ್ದಾಳೆನ್ನುವುದು ತಿಳಿದಿದೆ. ಆದರೆ ಆಕೆ ಹಿಂತಿರುಗುವ ಬಗೆಗಾಗಲಿ, ಇನ್ನಾವ ವಿಚಾರವಾಗಲಿ ಮಾತನಾಡದೆ ಕರೆ ನಿಷ್ಕ್ರಿಯಗೊಳಿಸಿದ್ದಾಳೆ.
ಎಂಟು ವರ್ಷಗಳಿಂದ ರಾಜು ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿದ್ದು  ಪಶ್ಚಿಮ ಬಂಗಾಳ ಮೂಲದ ರಾಜು ಅಬ್ಬಿಗರೆನಲ್ಲಿ ಬಾಡಿಗೆ ಮನೆಗಳಲ್ಲಿದ್ದಾರೆ. ಬಿರಿಯಾನಿ ಆಸನೆ ಇಷ್ಟಪಡದ ಕಾರಣ ರಾಜು ಸಹ ತಾನು ಸಸ್ಯಾಹಾರವನ್ನಷ್ಟೇ ಸೇವಿಸುವುದಾಗಿ ಹೇಳಿದ್ದರು. ಆದರೆ ಗುರುವಾರದ ಘಟನೆ ಅವರಲ್ಲಿ ಜಗಳ ತಂದಿದ್ದು ಆಕೆ ಮನೆ ತೊರೆದು ಹೋಗಲು ಕಾರಣವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT