ಬೆಂಗಳೂರು: ಲಿವ್ ಇನ್ ಪಾರ್ಟನರ್ ಜೊತೆಗಿನ ಕಲಹದಿಂದ ಬೇಸತ್ತ ಟೆಕಿಯೊಬ್ಬ ತನ್ನ ಫ್ಲ್ಯಾಟ್ ನಲ್ಲೇ ನೇಣಿಗೆ ಶರಣಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ದೊಡ್ಡಟಾಗೂರ್ ನಿವಾಸಿ ಚಂದ್ರಶೇಖರ್ ನೇಣಿಗೆ ಶರಣಾದ ಟೆಕಿ, ಸೋಮವಾರ ಘಟನೆ ನಡೆದಿದ್ದು, ಫ್ಲ್ಯಾಟ್ ನಲ್ಲಿ ಸಿಕ್ಕ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆಯಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಚಂದ್ರಶೇಖರ್ ಕಳೆದ ಕೆಲವು ವರ್ಷಗಳಿಂದ ಲಿವ್ ಇನ್ ಪಾರ್ಟನರ್ ಜೊತೆ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಬ್ಬರು ಮಾರತ್ ಹಳ್ಳಿಯ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು, 3 ತಿಂಗಳ ಹಿಂದೆ ಲಿವ್ ಇನ್ ಪಾರ್ಟನರ್ ಗೆ ಚಂದ್ರಶೇಖರ್ ಹಲ್ಲೆ ಮಾಡಿದ್ದರು, ಆಗ ಆಕೆ ಪೊಲೀಸರ ಸಹಾಯ ಪಡೆದಿದ್ದಳು, ಅಂದು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು, ಅಂದಿನಿಂದ ಆತ ಖಿನ್ನತೆಗೊಳಗಾಗಿದ್ದ, ಸೋಮವಾರ ಮತ್ತೆ ಇಬ್ಬರು ಜಗಳ ಮಾಡಿಕೊಂಡಿದ್ದಾರ. ಈ ವೇಳೆ ತನ್ನ ರೂಮಿನಲ್ಲಿ ಚಂದ್ರಶೇಖರ್ ನೇಣಿಗೆ ಶರಣಾಗಿದ್ದಾನೆ.