ಸಂಗ್ರಹ ಚಿತ್ರ 
ರಾಜ್ಯ

ಮದುವೆ, ಸಮಾರಂಭಗಳಲ್ಲಿ 'ನೀರಾ' ವೆಲ್ ಕಮ್ ಡ್ರಿಂಕ್: ಶಿವಮೊಗ್ಗದಲ್ಲಿ ಹೊಸ ಟ್ರೆಂಡ್!

: ಹೊಸಪೇಟೆ ಮತ್ತು ಶಿವಮೊಗ್ಗದ ಕೆಲ ಮನೆಗಳಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಆರಂಭವಾಗಿದೆ. ಮದುವೆ ಹಾಗೂ ಗೃಹ ಪ್ರವೇಶ ಸಮಾರಂಭಗಳಲ್ಲಿ ವೆಲ್ ಕಮ್ ಡ್ರಿಂಕ್ ...

ಹುಬ್ಬಳ್ಳಿ: ಹೊಸಪೇಟೆ ಮತ್ತು ಶಿವಮೊಗ್ಗದ ಕೆಲ ಮನೆಗಳಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಆರಂಭವಾಗಿದೆ. ಮದುವೆ ಹಾಗೂ ಗೃಹ ಪ್ರವೇಶ  ಸಮಾರಂಭಗಳಲ್ಲಿ ವೆಲ್ ಕಮ್ ಡ್ರಿಂಕ್ ಆಗಿ ತಂಪು  ಪಾನೀಯಗಳ ಬದಲು ನೀರಾ ಬಳಕೆ ಮಾಡುತ್ತಿದ್ದಾರೆ, ಇದರಲ್ಲಿ ಜೀರೋ ಪರ್ಸೆಂಟ್ ಆಲ್ಕೋಹಾಲ್  ಪ್ರಮಾಣ ಇರುವುದರಿಂದ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿದೆ.
ಇದಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದೆ, ಎರಡು ತಿಂಗಳ ಹಿಂದೆ,ಕುಣಿಗಲ್ ಮತ್ತು ತುಮಕೂರು ಗಳಿಂದ ನೀರಾ ಸಂಗ್ರಹಿಸಿ ಹೊಸಪೇಟೆಗೆ ಸುಮಾರು 1,500 ಗ್ಲಾಸ್ ನೀರಾವನ್ನು ಅತಿಥಿಗಳಿಗೆ ನೀಡಲಾಗಿತ್ತು,  ಇದೇ ರೀತಿಯ ಟ್ರೆಂಡ್ ಈಗ ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ ಹಾಗೂ ಹೊಸಪೇಟೆಗಳಲ್ಲಿ ಚಾಲ್ತಿಗೆ ಬರುತ್ತಿದೆ.
ತಮ್ಮ ಪುತ್ರನ ಮದುವೆಯಲ್ಲಿ ವೆಲ್ ಕಮ್ ಡ್ರಿಂಕ್ ಆಗಿ  ನೀರಾ ಕೊಡಲಾಗಿತ್ತು, ನೀರಾ ಕೊಟ್ಟಿದ್ದಕ್ಕೆ ಕೆಲವು ಅತಿಥಿಗಳು ಈ ಬಗ್ಗೆ ನಮ್ಮನ್ನು ಕೇಳಿದರು,  ಕೆಲವರು ಅಚ್ಚರಿ ವ್ಯಕ್ತ ಪಡಿಸಿದರು, ಆದರೆ ತೆಂಗಿನಕಾಯಿ ಪಾನೀಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಿಂದ ಹಲವು ಲಾಭಗಳಿವೆ, ಇದರ ಬಗ್ಗೆ ನಮ್ಮ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಎಂಜಿನೀಯರ್ ದಿವಾಕರ್ ಎಂಬುವರು ಹೇಳಿದ್ದಾರೆ.
2016 ರಲ್ಲಿ  ನೀರಾ ನೀತಿ ಜಾರಿಗೆ ತಂದು ಬಳಕೆಗೆ ಅನುಮತಿ ನೀಡಲಾಯಿತು, ಸಭೆ ಸಮಾರಂಭಗಳಲ್ಲಿ ನೀರಾ ಬಳಕೆ ಟ್ರೆಂಡ್ ಬಗ್ಗೆ  ಹಲವು ಪ್ರಶ್ನೆಗಳನ್ನು ಕೇಳುತ್ತಾರೆ,  ನೀರಾದಲ್ಲಿ  ಅತ್ಯಧಿಕ ಪ್ರಮಾಣದಲ್ಲಿ ವಿಟಮಿನ್ ಗಳಿವೆ,  ತಂಪು ನೀರಾವನ್ನು ಸರ್ವ್ ಮಾಡುವುದು ಇತ್ತೀಚಿನ ಟ್ರೆಂಡ್ ಆಗಿದೆ,  ಯಾರಾದರೂ ನನ್ನನ್ನು ಮದುವೆ, ಸಮಾರಂಭಗಳಿಗೆ ಆಹ್ವಾನಿಸಿದರೇ, ಅತಿಥಿಗಳಿಗೆ ವೆಲ್ ಕಮ್ ಡ್ರಿಂಕ್ ಆಗಿ ನೀರಾ ಕೊಡಲು ಸಲಹೆ ನೀಡುತ್ತೇನೆ ಎಂದು ದಿವಾಕರ್ ಹೇಳಿದ್ದಾರೆ
ನೀರಾವನ್ನು 4 ಡಿಗ್ರಿ ತಾಪಮಾನಕ್ಕಿಂತ ಹೆಚ್ಚಿರಬಾರದು,  ಎಂಎನ್ಎಸ್ ಪಿಎಲ್ ನಲ್ಲಿ 200 ಎಂ ಎಲ್  ನೀರಾಗೆ 30 ರು ಗೆ ಮಾರಾಟ ಮಾಡಲಾಗುತ್ತದೆ. ನೀರವನ್ನು ಕಲ್ಪ ರಸ ಎಂದು ಸಹ ಕರೆಯಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಶೇ. 20ರಷ್ಟು ಅಲ್ಪ ಸಂಖ್ಯಾತರು ಸಸ್ಯಾಹಾರಿಗಳು: ಬ್ರಿಕ್ಸ್ ಸಸ್ಯಾಹಾರಿ ಮೆನು ಸಂಬಂದ ಓವೈಸಿ ಪ್ರತಿಕ್ರಿಯೆ

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು