ರಾಜ್ಯ

ಸದೃಢ ಆರೋಗ್ಯಕ್ಕಾಗಿ ಪಂಚಕರ್ಮ ಚಿಕಿತ್ಸೆ ಮೊರೆ ಹೋದ ದೇವೇಗೌಡ, ಪುತ್ರ ಕುಮಾರಸ್ವಾಮಿ

Sumana Upadhyaya
ಉಡುಪಿ: ಲೋಕಸಭಾ ಚುನಾವಣೆಗೆ ತಿಂಗಳುಗಳ ಕಾಲ ಬಿರುಸಿನ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಚಿಕಿತ್ಸೆಯ ಮೊರೆ ಹೋಗಿದ್ದಾರೆ.
ಡಾ ತನ್ಮಯ್ ಗೋಸ್ವಾಮಿ ನೇತೃತ್ವದ ಐವರು ವೈದ್ಯರ ತಂಡ ಈ ಇಬ್ಬರು ನಾಯಕರಿಗೆ ಆಯುರ್ವೇದ ಪಂಚಕರ್ಮ ರಸಾಯನ ತೆರಪಿ ಮಾಡುತ್ತಿದ್ದಾರೆ. ದೇಹಕ್ಕೆ ಶಕ್ತಿ ನೀಡಿ ಸದೃಢವಾಗಿಸಲು ಇರುವ ಚಿಕಿತ್ಸೆಯಿದು. ಈ ವಿಧಾನ ದೇಹದೊಳಗಿರುವ ಕಲ್ಮಷಗಳನ್ನು ತೆಗೆದುಹಾಕುತ್ತದೆ. ಪ್ರಕೃತಿ ಚಿಕಿತ್ಸೆ ವಿಧಾನದ ಮೂಲಕ ಉಸಿರಾಟ, ಆವಿಸ್ನಾನ, ಸಂಪೂರ್ಣ ಸಸ್ಯಾಹಾರ ಸೇವನೆ ಮತ್ತು ಶಾರೀರಿಕ ಚಿಕಿತ್ಸೆಯನ್ನು ಚಿಕಿತ್ಸಾ ವಿಧಾನ ಒಳಗೊಂಡಿದೆ.
SCROLL FOR NEXT