ರಾಜ್ಯ

ಮಲ್ಪೆಯಲ್ಲಿ ಹೈದಾರಾಬಾದ್ ವ್ಯಕ್ತಿಯ ಶವಪತ್ತೆ

Shilpa D
ಉಡುಪಿ: ಮಲ್ಪೆ ಕೊಳದಲ್ಲಿ ಆಂಧ್ರಪ್ರದೇಶ ಮೂಲದ ಗುರುವೇಲು ಎಂಬಾತನನ್ನು ರವಿವಾರ ಅಪರಿಚಿತರು ಹೊಡೆದು ಕೊಲೆ ಮಾಡಿದ್ದಾರೆ.
ಅಮಿತ್‌ (27) ಎಂಬವರನ್ನು ಏಪ್ರಿಲ್ 27ರಂದು ಮಲ್ಪೆ ಕೊಳದ ಹನುಮಾನ್‌ ವಿಠೊಬಾ ಭಜನ ಮಂದಿರದ ಎದುರು ಸಮುದ್ರದ ದಡದ ಕಲ್ಲುಗಳ ಮೇಲೆ ಮಲಗಿದ್ದರು. ರಾತ್ರಿ 12.30ರ ಹೊತ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಮರದ ದೊಣ್ಣೆಯಿಂದ ಅಮಿತ್‌ ಅವರ ತಲೆ ಹಾಗೂ ಕೈಗಳಿಗೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಮಿತ್‌ ಅವರನ್ನು ಕೊಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಅಪರಿಚಿತ ವ್ಯಕ್ತಿಯು ಅಮಿತ್‌ ಕೊಲೆಗೈಯುವ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿ ಪ್ರಕರಣ ದಾಖಲಾಗಿದೆ. ಇದೇ ಹಿನ್ನೆಲೆಯಲ್ಲಿ ವಿಠೊಬಾ ಭಜನ ಮಂದಿರದ ಬಳಿಯಲ್ಲಿ ನಿಂತಿದ್ದ ಆಂಧ್ರಪ್ರದೇಶ ಮೂಲದ ಗುರುವೇಲು ಮೇಲೆಯೂ ಕೆಲವರು ಹಲ್ಲೆ ನಡೆಸದ್ದಾರೆ. ಹಲ್ಲೆಯ ಕಾರಣದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಮಲ್ಪೆ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. 
SCROLL FOR NEXT