ಸಾಂದರ್ಭಿಕ ಚಿತ್ರ 
ರಾಜ್ಯ

ಶಿವರಾಮ ಕಾರಂತರಿಂದ ರಿಷಭ್ ಶೆಟ್ಟಿಯವರೆಗೂ ಬೇಕು ಕುಂದಾಪುರ ಕನ್ನಡ!

ಆಗಸ್ಟ್ 1 ನೇ ದಿನಾಂಕವನ್ನು ಜಗತ್ತಿನಾದ್ಯಂತ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ, ಇಸ್ರೇಲ್, ಬಹರೈನ್ ಮತ್ತು ರಷ್ಯಾ ಸೇರಿದಂತೆ ...

ಬೆಂಗಳೂರು: ಆಗಸ್ಟ್ 1 ನೇ ದಿನಾಂಕವನ್ನು ಜಗತ್ತಿನಾದ್ಯಂತ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ, ಇಸ್ರೇಲ್, ಬಹರೈನ್ ಮತ್ತು ರಷ್ಯಾ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿರುವ  ಕುಂದಾಪುರ ಮೂಲದ ಜನತೆ ಈ ದಿನವನ್ನು ಆಚರಿಸುತ್ತಾರೆ.
ವಿಶ್ವ ಕುಂದಾಪುರ ದಿನ ಆಚರಿಸುವ ಐಡಿಯಾ ನೀಡಿದ್ದು ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಅವರ ತಂಡ, ಇವರು ಮೂಲತ ಕುಂದಾಪುರ ದವರಾಗಿದ್ದು, ಇದೊಂದು ಐಡಿಯಾವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು, ಅದಕ್ಕೆ ಭರಪೂರ ಪ್ರತಿಕ್ರಿಯೆಗಳು ಹರಿದು ಬಂದವು.
ಕನ್ನಡ ಭಾಷೆಯೇ ಮೊದಲ ಹೆಮ್ಮೆ,  ಕುಂದಾಪುರ ಕನ್ನಡದಲ್ಲಿ ಭಾವನೆಗಳನ್ನು ಒತ್ತಿ ಹೇಳುವುದರಿಂದ ಆ ಭಾಷೆ ಅನುಪಮಾವಾಗಿದೆ, ಆಗಸ್ಟ್ 1ನೇ ತಾರಿಖನ್ನು ವಿಶ್ವಾದ್ಯಂತ ಇರುವ ಕುಂದಾಪುರಿಗಳು ಆಚರಿಸುತ್ತಾರೆ.
ಕುಂದಾಪುರ ಕನ್ನಡ ರಂಗಭೂಮಿಯ ಹಲವು ನಾಟಕಗಳಿಗೆ ಸ್ಪೂರ್ತಿಯಾಗಿದೆ, ಜೊತೆಗೆ ಸಿನಿಮಾ, ಇಂಟರ್ನೆಟ್ ಜೋಕ್ಸ್, ಯೂಟ್ಯೂಬ್ ವಿಡಿಯೋಗಳಲ್ಲೂ  ಕುಂದಾಪುರ ಕನ್ನಡದ್ದೇ ಹವಾ, ಶಿವರಾಮ ಕಾರಂತರ ಕಾಲದಿಂದ ಇತ್ತೀಚಿನ ರಿಷಭ್ ಶೆಟ್ಟಿ ವರೆಗೂ ಕುಂದಾಪುರ ಕನ್ನಡ ಭಾಷೆಯನ್ನು ತಮ್ಮ ಸಂಭಾಷಣೆಯಲ್ಲಿ ಬಳಸಿಕೊಂಡಿದ್ದಾರೆ, ಉಳಿದವರು ಕಂಡಂತೆ ಸಿನಿಮಾದಲ್ಲಿ ಬಳಸಿರುವ ಭಾಷೆ ಎಲ್ಲರ ಮೆಚ್ಚುಗೆ ಗಳಿಸಿದೆ.
ಉಡುಪಿ ತಾಲೂಕಿನ ಸಣ್ಣ ಹಳ್ಳಿಯಾದ ಕುಂದಾಪುರದಿಂದ ನೂರಾರು ಮಂದಿ ಜಗತ್ತಿನ ವಿವಿಧ ಭಾಗಗಳಿಗೆ ವಿವಿಧ ಉದ್ದೇಶಗಳಿಗಾಗಿ ತೆರಳಿದ್ದಾರೆ, ಅವರು ಮಾತನಾಡುವ ಭಾಷೆಯಿಂದಾಗಿ ನಾವು ವಿದೇಶದಲ್ಲಿದ್ದರೂ ನಮಗೆ ಮನೆಯಲ್ಲಿಯೇ ಇರುವುದಾಗಿ ಭಾವನೆ ಬೆಳೆಯುತ್ತದೆ ಎಂದು ಹೊಟೇಲ್ ಉದ್ಯಮಿ ರಮಾನಾಥ ಶೆಟ್ಟಿ ಅಭಿಪ್ರಾಯ ಪಡುತ್ತಾರೆ.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ವಿವಿಧ ಶೈಲಿಗಳಲ್ಲಿ ಮಾತನಾಡುತ್ತಾರೆ, ಆದರೆ ಕುಂದಾಪುರ ಕನ್ನಡದಷ್ಟು ಆಕರ್ಷಣೆ ಮಾಡುವುದಿಲ್ಲ, ಕನ್ನಡ ಭಾಷೆಗಾಗಿ  ಕುಂದಾಪುರ ಮೂಲದ ಹಲವು ವ್ಯಂಗ್ಯ ಚಿತ್ರಕಾರರು,  ಕಲಾವಿದರು, ನಟ, ನಿರ್ದೇಶಕರು ಕೊಡುಗೆ ನೀಡಿದ್ದಾರೆ, ಇದೊಂದು ಅಪ್ರತಿಮ ಭಾಷೆ ಎಂದು ಜಿಕೆವಿಕೆ ಕಾಲೇಜು ವಿದ್ಯಾರ್ಥಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT