ಸಾಂದರ್ಭಿಕ ಚಿತ್ರ 
ರಾಜ್ಯ

ಫೇಸ್ ಬುಕ್ ನಲ್ಲಿ ಅಪರಿಚಿತನ ಸ್ನೇಹ; 2 ಲಕ್ಷ ರೂ.ಬೆಲೆ ಬಾಳುವ ಚಿನ್ನ ಕಳೆದುಕೊಂಡ ಮಹಿಳೆ

ಆನ್ ಲೈನ್ ನಲ್ಲಿ ಸ್ನೇಹ ಮಾಡುವಾಗ ಹುಷಾರಾಗಿರಿ ಎಂದು ಮಾಧ್ಯಮಗಳಲ್ಲಿ ಹಾಗೂ ಪೊಲೀಸರು ಅನೇಕ

ಬೆಂಗಳೂರು: ಆನ್ ಲೈನ್ ನಲ್ಲಿ ಸ್ನೇಹ ಮಾಡುವಾಗ ಹುಷಾರಾಗಿರಿ ಎಂದು ಮಾಧ್ಯಮಗಳಲ್ಲಿ ಹಾಗೂ ಪೊಲೀಸರು ಅನೇಕ ಬಾರಿ ಎಚ್ಚರಿಕೆ ನೀಡುತ್ತಿದ್ದರೂ ಅವರ ಸಲಹೆಯಿಂದ ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. 
ಫೇಸ್ ಬುಕ್ ನಲ್ಲಿ ಅಪರಿಚಿತನೊಬ್ಬನ ಜೊತೆ ಸ್ನೇಹ ಮಾಡಿಕೊಂಡ 23 ವರ್ಷದ ಮಹಿಳೆ 2.2 ಲಕ್ಷ ರೂಪಾಯಿ ಮೌಲ್ಯದ ಆಭರಣ ಕಳೆದುಕೊಂಡಿದ್ದಾರೆ.
ನಡೆದ ಘಟನೆಯೇನು?: ಬೆಂಗಳೂರಿನ ರಾಜರಾಜೇಶ್ವರಿನಗರದ ಗೃಹಿಣಿ ಅಶ್ವಿನಿ ವಿ, ಜೆ.ಪಿ ನಗರ 6ನೇ ಹಂತದ ನಿವಾಸಿ ವಿನೋದ್ ಅಲಿಯಾಸ್ ಮಂಜುನಾಥ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದ ಜೂನ್ 1ರಂದು ವಿನೋದ್ ನಿಂದ ಅಶ್ವಿನಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆತನ ಪರಿಚಯ ಆಕೆಗಿಲ್ಲದಿದ್ದರೂ ಕೂಡ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದರು. ನಂತರ ಚಾಟಿಂಗ್ ಮಾಡಿ ಪರಿಚಯವಾಗಿ 10 ದಿನಗಳೊಳಗೆ ಮೊಬೈಲ್ ನಂಬರ್ ಬದಲಾಯಿಸಿಕೊಂಡರು.
ಒಂದು ದಿನ ವಿನೋದ್ ಅಶ್ವಿನಿಗೆ ಕರೆ ಮಾಡಿ ತಾನು ಕಷ್ಟದಲ್ಲಿದ್ದು ತನ್ನ ಸೋದರಿಗೆ ನೀಡಲು ಹಣ ಬೇಕೆಂದು ಕೇಳಿದನು. ಅಶ್ವಿನಿ ನಾಲ್ಕೂವರೆ ಸಾವಿರ ರೂಪಾಯಿ ಕೊಟ್ಟರು. ಕೆಲ ದಿನಗಳು ಕಳೆದ ನಂತರ ಮತ್ತೆ ಕರೆ ಮಾಡಿ ತಾಯಿಗೆ ಆರೋಗ್ಯ ಸರಿಯಿಲ್ಲ ಸರ್ಜರಿಯಾಗಬೇಕು ಹಣ ನೀಡಿ ಎಂದು ಕೇಳಿದನು. 
ತಮ್ಮ ಬಳಿ ಹಣ ಇಲ್ಲ ಎಂದು ಅಶ್ವಿನಿ ಹೇಳಿದಾಗ ಚಿನ್ನ ಕೊಡಿ ಎಂದು ಕೇಳಿದನು. ಆತನನ್ನು ನಂಬಿ ಅಶ್ವಿನಿ ಎರಡು ಚಿನ್ನದ ಸರ, ಬ್ರೇಸ್ ಲೆಟ್, 3 ಉಂಗುರ, ಕಿವಿಯೋಲೆ ಎಲ್ಲಾ ಸೇರಿ 2 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಚಿನ್ನ ನೀಡಿದ್ದಾರೆ. 
ಚಿನ್ನ ಪಡೆದ ನಂತರ ವಿನೋದ್ ಅಶ್ವಿನಿಯಿಂದ ದೂರವಾಗಲು ಪ್ರಯತ್ನಿಸಿದ. ಆತನನ್ನು ಸಂಪರ್ಕಿಸಲು ಯತ್ನಿಸಿದರೆ ಆತ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅಶ್ವಿನಿಗೆ ಆಗ ಮೋಸ ಹೋಗಿದ್ದು ಅರಿವಿಗೆ ಬಂತು. ಆತನ ಹೆಸರು ವಿನೋದ್ ಬದಲಿಗೆ ಮಂಜುನಾಥ್ ಎಂದಾಗಿತ್ತು. 
ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT