ರಾಜ್ಯ

ಕಲಬುರ್ಗಿ: ಕೊಲೆ ವಿಚಾರ ಪೋಲೀಸರಿಗೆ ತಿಳಿಯಿತೆಂದು ಹೆದರಿ ಆತ್ಮಹತ್ಯೆಗೆ ಶರಣಾದ ಆರೋಪಿ!

Raghavendra Adiga

ಕಲಬುರಗಿ: ಮಹಿಳೆಯೋರ್ವಳನ್ನು ಕೊಲೆ ಮಾಡಿ, ಚಿನ್ನಾಭರಣ ದೋಚಿರುವ ವಿಚಾರ ಪೊಲೀಸರಿಗೆ ತಿಳಿಯಿತು ಎಂಬ ಭಯದಿಂದ ಆರೋಪಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಶನ್ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ.

ಸ್ಟೇಶನ್ ಗಾಣಗಾಪುರದ ನಿವಾಸಿ ಪೋಸಯ್ಯ ಕಲ್ಯಾಣಕರ್ (28) ಮೃತ ಆರೋಪಿ. ನೀಲೂರು ಗ್ರಾಮದ 40 ವರ್ಷದ ಗೃಹಿಣಿ ಲಕ್ಷ್ಮೀಬಾಯಿ ಎಂಬುವವರು ಬುಧವಾರ ನಸುಕಿನ ಜಾವ ಬಹಿರ್ದೆಸೆಗಾಗಿ ಮನೆಯಿಂದ ಊರಾಚೆಗೆ ತೆರಳಿದ್ದರು. ಅವರ ಮೈಮೇಲಿನ ಒಡವೆ ಗಮನಿಸಿದ ಆರೋಪಿ ಪೋಸಯ್ಯ, ಅವರನ್ನು ಹಿಂಬಾಲಿಸಿ ನಿರ್ಜನ ಪ್ರದೇಶದಲ್ಲಿ ಕೊರಳಿಗೆ ಹಗ್ಗ ಹಾಕಿ ಮುಳ್ಳಿನ ಪೊದೆಯಲ್ಲಿ ಎಳೆದೊಯಿದು ತಲೆ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಅವರು ಧರಿಸಿದ್ದ ಚಿನ್ನಾಭರಣಗಳನ್ನು ದೋಚಿ ನೇರವಾಗಿ ಸ್ವಂತ ಊರು ಸ್ಟೇಷನ್ ಗಾಣಗಾಪುರಕ್ಕೆ ತೆರಳಿದ್ದನು.

ನಂತರ ಈ ವಿಚಾರ ಪೊಲೀಸರಿಗೆ ತಿಳಿದಿದೆ ಎನ್ನುವುದು ಗೊತ್ತಾಗಿ ಬುಧವಾರ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು ಘಟನೆ ಕುರಿತಂತೆ ರೇವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT