ರಾಜ್ಯ

ಬಳ್ಳಾರಿ: ಮಲಗಿದ್ದ ವೇಳೆ ಮನೆ ಮೇಲ್ಛಾವಣಿ ಕುಸಿತ; ಮೂವರ ಸಾವು

Shilpa D

ಬಳ್ಳಾರಿ: ರಾತ್ರಿ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗದಲ್ಲಿ ನಡೆದಿದೆ.

ನಾಡಂಗ ಗ್ರಾಮದ ಖಾದರ್ ಬಾಷಾ ಎಂಬುವರ ಕಚ್ಚಾಮನೆಯು ಏಕಾಏಕಿ ಕುಸಿತ ಕಂಡಿದ್ದು, ಮನೆಯೊಳಗೆ ಮಲಗಿದ್ದ ಇಮಾಮ್ ಬೀ (45), ಹಸೀನಾ (25), ಇಮ್ರಾನ್ (3) ಮನೆಯ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

ಆಗಾಗ ಮಳೆ ಸುರಿದ ಪರಿಣಾಮ ಈ ಮನೆಯು ಶಿಥಿಲಾವಸ್ಥೆಗೆ ತಲುಪಿದ್ದು, ಉಳಿದು ಕೊಳ್ಳಲು ಸೂರಿಲ್ಲದೇ ಅದೇ ಮನೆಯಲ್ಲೇ ನಿನ್ನೆಯ ರಾತ್ರಿ ಈ ಮೂವರು ಮಲಗಿದ್ದರು. ನಿನ್ನೆಯ ದಿನ ರಾತ್ರಿ 12ಗಂಟೆಯ ಸುಮಾರಿಗೆ ಕಚ್ಚಾಮನೆಯು ಸಂಪೂರ್ಣವಾಗಿ ಕುಸಿದಿದೆ. ಅದೃಷ್ಟ ವಶಾತ್ ತಾಯಿಯ ಪಕ್ಕದಲ್ಲಿ ಮಲಗಿದ್ದ ಹಸುಗೂಸು ದುರಂತದಿಂದ ಪಾರಾಗಿದೆ.

SCROLL FOR NEXT