ರಾಜ್ಯ

ಹೊಸಪೇಟೆ: ಅನರ್ಹ ಶಾಸಕ  ಆನಂದ್ ಸಿಂಗ್ ಪುತ್ರನ ಅದ್ದೂರಿ ವಿವಾಹ

Nagaraja AB

ಹೊಸಪೇಟೆ: ಅನರ್ಹ ಶಾಸಕ, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ ಹಾಗೂ ಉದ್ಯಮಿ ಪ್ರಭು ಸಬರದ ಅವರ ಮಗಳು ಸಂಜನಾ ಅವರ ವೈಭವೋಪೇತ ವಿವಾಹ ನಡೆದಿದ್ದು, ಜನಸಾಗರವೇ ಹರಿದು ಬಂದಿದೆ.

ಆನಂದ್ ಸಿಂಗ್ ಅವರ ಭವ್ಯ ಬಂಗಲೆಯ ಹಿಂಭಾಗದಲ್ಲಿನ 10 ಎಕರೆ ಪ್ರದೇಶದಲ್ಲಿ ಶಾಮಿಯಾನ ಹಾಕಲಾಗಿದ್ದು, ತಿರುಮಲ ತಿರುಪತಿಗೆ ಹೋಲುವ ಅದ್ದೂರಿ ಸೆಟ್ ಹಾಕಲಾಗಿದ್ದು, ಎಲ್ಲರ ಕಣ್ಣು ಕುಕ್ಕುವಂತಿದೆ. ರಜಪೂತ ಸಂಪ್ರದಾಯದಂತೆ ಸಿದ್ದಾರ್ಥ, ವಧು ಸಂಜನಾ ಅವರಿಗೆ ತಾಳಿ ಕಟ್ಟುವ ಕಾರ್ಯಕ್ರಮ ನೆರವೇರಿತು.

ಸುಮಾರು 50 ಸಾವಿರ ಜನರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಹಲವು ಗಣ್ಯರು ಬಂದು ನೂತನ ವಧು ವರನನ್ನು ಆಶೀರ್ವದಿಸಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಂದನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ.

SCROLL FOR NEXT