ಬಂಧಿತ ತೇಜ್ ಸಿಂಗ್ 
ರಾಜ್ಯ

ಬೆಂಗಳೂರು: ಪತ್ನಿ ಕೊಂದು ಅಪಘಾತವಾಗಿದೆ ಎಂದು ಬಿಂಬಿಸಿದ್ದ ಪತಿಯ ಬಂಧನ

ತನ್ನ ಪತ್ನಿಯನ್ನು ಕಾರು ಹರಿಸಿ ಕೊಂದು ಬಳಿಕ ಅಪಘಾತವಾಗಿದೆ ಎಂದು ಬಿಂಬಿಸಿದ ಪತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರು: ತನ್ನ ಪತ್ನಿಯನ್ನು ಕಾರು ಹರಿಸಿ ಕೊಂದು ಬಳಿಕ ಅಪಘಾತವಾಗಿದೆ ಎಂದು ಬಿಂಬಿಸಿದ ಪತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪತ್ನಿಯನ್ನು ಜಾಲಿ ರೈಡ್‍ ಗೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ನವೆಂಬರ್ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತೇಜ್ ಸಿಂಗ್ ಬಂಧಿತ ಪತಿ. 27 ವರ್ಷದ ತೇಜ್ ಸಿಂಗ್ ಹಾಗೂ ಆತನ ಪತ್ನಿ ದೀಪಲ್ ಕಂವಾರ್(27) ಮೂಲತಃ ರಾಜಸ್ಥಾನದವರಾಗಿದ್ದು, ಚಿಕ್ಕ ಚಿನ್ನದ ಮಳಿಗೆ ಹೊಂದಿದ್ದರು. ಹುಣಿಸೇಮಾರನಹಳ್ಳಿ ಬಳಿಯ ಜನತಾ ಕಾಲೋನಿಯಲ್ಲಿ ವಾಸವಿದ್ದರು. 

ಕೌಟುಂಬಿಕ ವಿಚಾರವಾಗಿ ಪತ್ನಿ ಜತೆ ಜಗಳವಾಡುತ್ತಿದ್ದ ತೇಜ್ ಸಿಂಗ್ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಅದರಂತೆ ನ.16ರಂದು ತೇಜ್‌ಸಿಂಗ್‌, ತನ್ನ ಸ್ನೇಹಿತ ಗುರುಪ್ರೀತ್‌ ಸಿಂಗ್‌ ಹೆಸರಿನಲ್ಲಿ ಬಾಡಿಗೆ ಕಾರು ಬುಕ್‌ ಮಾಡಿಸಿದ್ದ. ಬಳಿಕ ತೇಜ್‌ ಮನೆಗೆ ಗುರು ಕಾರು ತಂದು ಬಿಟ್ಟು ತೆರಳಿದ್ದ. ಅಮೃತಹಳ್ಳಿ ಸಮೀಪ ಹೋಟೆಲ್‌ಗೆ ಅಂದು ರಾತ್ರಿ ಊಟಕ್ಕೆ ಪತ್ನಿ ಹಾಗೂ ಸ್ನೇಹಿತರಾದ ಶಂಕರ್‌ಸಿಂಗ್‌ ಮತ್ತು ಭರತ್‌ಸಿಂಗ್‌ ಜತೆ ತೇಜ್‌ ಹೋಗಿದ್ದ. ಆ ವೇಳೆ ಸ್ನೇಹಿತರ ಜತೆ ಸೇರಿ ಕಂಠಮಟಾ ಮದ್ಯ ಸೇವಿಸಿದ ತೇಜ್‌, ಪತ್ನಿಗೂ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ನಂತರ ಸ್ನೇಹಿತರನ್ನು ಅವರ ಮನೆಗೆ ಬಿಟ್ಟು, ರಾತ್ರಿ 12.20ರ ಸುಮಾರಿಗೆ ಪತ್ನಿಯನ್ನು ದೇವನಹಳ್ಳಿ ರಸ್ತೆಗೆ ಕರೆ ತಂದಿದ್ದಾನೆ. ಪಾನಮತ್ತಳಾಗಿ ನಿದ್ರೆಗೆ ಜಾರಿದ್ದ ಪತ್ನಿಯನ್ನು ತೇಜ್‌, ಬಚ್ಚಳ್ಳಿ ಗೇಟ್‌ ಸಮೀಪ ಕಾರು ಚಲಿಸುವಾಗಲೇ ಬಾಗಿಲು ತೆರೆದ ಪರಿಣಾಮ ಆಕೆ ಕೆಳಗೆ ಬಿದ್ದಿದ್ದಳು. ಆಗ ಕಾರನ್ನು ರಿವರ್ಸ್‌ ಮಾಡಿಕೊಂಡು ಬಂದ ತೇಜ್‌, ರಸ್ತೆ ಬದಿ ಉರುಳಿದ್ದ ಪತ್ನಿ ಮೇಲೆ ಹರಿಸಿ ಭೀಕರವಾಗಿ ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT