ರಾಜ್ಯ

ಅದಿರು ಸಾಗಿಸುತಿದ್ದ ಲಾರಿ ಪಲ್ಟಿ: 10 ಗಣಿ ಕಾರ್ಮಿಕರಿಗೆ ಗಾಯ, ತಪ್ಪಿದ ಬಾರಿ ಅನಾಹುತ

Nagaraja AB

ಹೊಸಪೇಟೆ: ಅದಿರು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ 10 ಗಣಿ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ

ಹೊಸಪೇಟೆಯ ಹೊರವಲದ ಶಂಕರ್ ನಗರ ಕ್ಯಾಂಪ್ ಬಳಿಯ  ಪಿ.ಬಿ.ಎಸ್.ಮೈನ್ಸ್ ನಲ್ಲಿ ಅದಿರು ಸಾಗಿಸುತ್ತಿದ್ದ ಲಾರಿಯಲ್ಲಿ ಹದಿನೈದಕ್ಕೂ ಹೆಚ್ಚು ಕಾರ್ಮಿಕರನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಕಾರ್ಮಿಕರನ್ನ ಕರೆದೊಯ್ಯಲು ಪ್ರತ್ಯೇಕ ವಾಹನ ವ್ಯವಸ್ಥೆಮಾಡದೆ ಅದಿರು ಸಾಗಿಸುತಿದ್ದ ಲಾರಿಯಲ್ಲೇ ಕಾರ್ಮಿಕರನ್ನು ಸಾಗಾಟ ಮಾಡಲಾಗುತಿತ್ತು ಎನ್ನಲಾಗಿದೆ.

ಇವರೆಲ್ಲ  ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದ ಗಣಿ ಕಾರ್ಮಿಕರಾಗಿದ್ದಾರೆ. ಗಾಯಾಳುಗಳನ್ನು 
ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಗಂಭೀರ ಪರಿಸ್ಥಿತಿಯಲ್ಲಿರುವ 
 ಗಾಯಾಳು ಲಕ್ಷ್ಮಮ್ಮ ಮತ್ತು ಕುರಿ ಜಂಬುನಾಥ ಅವರನ್ನು  ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. 

ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

SCROLL FOR NEXT