ಜಗದೀಶ್ ಶೆಟ್ಟರ್ 
ರಾಜ್ಯ

ಹುಬ್ಬಳ್ಳಿಗೆ ಆರೋಗ್ಯ ಯೋಜನೆಯಡಿ ಸ್ಮಾರ್ಟ್ ಸಿಟಿ ಮೆರಿಟ್ ಪ್ರಮಾಣಪತ್ರ

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ- ಸಬಲೀಕರಣ ಭಾರತ ಪ್ರಶಸ್ತಿಯಡಿಯಲ್ಲಿ ಮೆರಿಟ್ ಪ್ರಮಾಣಪತ್ರಕ್ಕೆ ಜಿಲ್ಲೆಯ ಚಿತಗುಪ್ಪಿ ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದ ಸ್ಮಾರ್ಟ್ ಸಿಟಿ ಯೋಜನೆ ಆಯ್ಕೆಯಾಗಿದೆ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ- ಸಬಲೀಕರಣ ಭಾರತ ಪ್ರಶಸ್ತಿಯಡಿಯಲ್ಲಿ ಮೆರಿಟ್ ಪ್ರಮಾಣಪತ್ರಕ್ಕೆ ಜಿಲ್ಲೆಯ ಚಿತಗುಪ್ಪಿ ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದ ಸ್ಮಾರ್ಟ್ ಸಿಟಿ ಯೋಜನೆ ಆಯ್ಕೆಯಾಗಿದೆ

ಹುಬ್ಬಳ್ಳಿಯ ಯೋಜನೆಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ‘ಅತ್ಯುತ್ತಮ ಸ್ಮಾರ್ಟ್ ಆರೋಗ್ಯ ಯೋಜನೆ’ ವರ್ಗದಲ್ಲಿ  ಆಯ್ಕೆ ಮಾಡಿದೆ. ಸ್ಮಾರ್ಟ್ ಸಿಟಿ ಸಬಲೀಕರಣ ಭಾರತ ಪ್ರಶಸ್ತಿಯ -2019ರ ಸಂಯೋಜಕ ಬಿ.ಶೇಖರ್ ಈ ವಿಷಯ ಪ್ರಕಟಿಸಿದ್ದಾರೆ. 
 
ಚಿತಗುಪ್ಪಿ ಆಸ್ಪತ್ರೆ ವಿದ್ಯುನ್ಮಾನ ಆರೋಗ್ಯ ದಾಖಲೆಗಳು (ಇಎಂಆರ್ ), ವಾಸ್ತವಾಂಶದ ಆರೋಗ್ಯ ಸೇವೆ, ಸ್ಮಾರ್ಟ್ ತಪಾಸಣೆಗಲು, ಸ್ಮಾರ್ಟ್ ಆಸ್ಪತ್ರೆಯ ನಿರ್ವಹಣಾ ವ್ಯವಸ್ಥೆ ಸಾಫ್ಟ್ ವೇರ್, ಔಷಧ ನಿರ್ವಹಣಾ ವ್ಯವಸ್ಥೆ ಮತ್ತಿತರರ ವ್ಯವಸ್ಥೆಗಳನ್ನು ಹಮ್ಮಿಕೊಂಡಿದೆ.ಈ ಯೋಜನೆಯನ್ನು ಆಸ್ಪತ್ರೆಯಲ್ಲಿ ಒಟ್ಟಾರೆ 3.05 ಕೋಟಿ ರೂ. ವ್ಯಯಿಸಲಾಗಿದೆ. 
 
ಸ್ಮಾರ್ಟ್ ಆರೋಗ್ಯ ಯೋಜನೆಯ ಮುಖ್ಯಾಂಶಗಳೆಂದರೆ, ರೋಗಿಗಳ ದಾಖಲೆಗಳಿಗೆ ಅತಿ ಶೀಘ್ರದ ಸಂಪರ್ಕ, ಟೆಲಿ-ಮೆಡಿಸಿನ್ ಕಿಟ್ ನಲ್ಲಿ ರೋಗಿಗಳ ಮಾಹಿತಿ ಮುದ್ರಣ, ವಿಡಿಯೋ ಕಾನ್ಫರೆನ್ಸ್ ಮೂಲಕ ರೋಗಿಗಳು ಹಾಗೂ ವೈದ್ಯರ ಸಂಪರ್ಕ ಮತ್ತಿತರರ ಅಂಶಗಳಾಗಿವೆ.ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಈ ವರ್ಗದಲ್ಲಿ ಎರಡನೇ ಪ್ರಶಸ್ತಿ ದೊರೆತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT