ರಾಜ್ಯ

ಹೊಸ ವರ್ಷದ ಶುಭ ಕೋರಿದ ಮುಖ್ಯಮಂತ್ರಿ, ಎಚ್‌ಡಿಕೆ

Srinivasamurthy VN

ಬೆಂಗಳೂರು: ಹೊಸ ವರ್ಷದ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಡಿನ ಜನತೆಗೆ ಶುಭಕೋರಿದ್ದಾರೆ.

ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿರುವ ನಾಡಿನ ಸಮಸ್ತಜನತೆಯಲ್ಲಿ ಕಳಕಳಿಯ ಪ್ರಾರ್ಥನೆ. ಸಭ್ಯತೆ ಕಾಪಾಡಿಕೊಳ್ಳಿ, ಆಚರಣೆ ಹಿತಮಿತವಾಗಿರಲಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಿರಿ. ಸುರಕ್ಷಿತವಾಗಿ ಸಿಹಿನೆನಪುಗಳೊಂದಿಗೆ ಈ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಹೊಸ ನಾಳೆಗಳನ್ನು ತರಲಿರುವ ಹೊಸ ವರುಷ ಜನರಿಗೆ ಒಳಿತು ಮಾಡಲಿ. ಸುಖ ಸಮೃದ್ಧಿಗಳನ್ನು ಪ್ರಾಪ್ತಿ ಮಾಡಲಿ. ನಾಡು ದಿಗಂತದತ್ತ ಹಜ್ಜೆ ಹಾಕಲಿ, ಹೊಸ ಮನ್ವಂತರ ಸೃಷ್ಟಿಸಲಿ. ಸಮಸ್ತ ನಾಗರಿಕರಿಗೆ, ಪಕ್ಷದ ಕಾರ್ಯಕರ್ತ ಸೋದರರಿಗೆ, ಅಭಿಮಾನಿಗಳಿಗೆ 2020ರ ಹೊಸ ವರ್ಷದ ತುಂಬು ಹೃದಯದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

SCROLL FOR NEXT