ರವಿ ಪೂಜಾರಿ ಸ್ಕೆಚ್ 
ರಾಜ್ಯ

ಪಾತಕಿ ರವಿ ಪೂಜಾರಿ ಅವನತಿಗೆ ಮುಖ್ಯ ಕಾರಣ ಏನು? ಆತನ ಭೂಗತ ಸಾಮ್ರಾಜ್ಯ ಕುಸಿದದ್ದು ಹೇಗೆ?

ಭೂಗತ ಪಾತಕಿ ರವಿ ಪೂಜಾರಿ ಉಡುಪಿ ಜಿಲ್ಲೆಯ ನೇರ್ಗಿ ಗ್ರಾಮದವನು, ಆತನ ಅಪರಾಧ ಜೀವನ ಆರಂಭವಾಗಿದ್ದು ಮಂಬಯಿಯಿಂದ....

ಉಡುಪಿ: ಭೂಗತ ಪಾತಕಿ ರವಿ ಪೂಜಾರಿ ಉಡುಪಿ ಜಿಲ್ಲೆಯ ನೇರ್ಗಿ ಗ್ರಾಮದವನು,  ಆತನ ಅಪರಾಧ ಜೀವನ ಆರಂಭವಾಗಿದ್ದು ಮಂಬಯಿಯಿಂದ.
1990ರಲ್ಲಿ ಉಡುಪಿಯ ಪಣಿಯೂರಿನ ಸಾಧು ಶೆಟ್ಟಿ ರವಿ ಪೂಜಾರಿಯನ್ನು ಗ್ಯಾಂಗ್ ಸ್ಟರ್ ಚೋಟಾ ರಾಜನ್ ಗೆ ಪರಿಚಯಿಸಲಾಗಿತ್ತು, ಮಂಗಳೂರು ಮತ್ತು ಉಡುಪಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಾಗೂ ಶ್ರೀಮಂತರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದನು. 
2005 ರಿಂದ ಕರಾವಳಿ ಜಿಲ್ಲೆಗಳಲ್ಲಿ ಪೂಜಾರಿ ನಂಬಿಕಸ್ಥ ಸಹಚರರಿ ದೂರಾಗಿದ್ದರಿಂದ, ಆತನ ಭೂಗತ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿತ್ತು.  ನಂತರ ಆತ ಬಿಹಾರದಿಂದ ಸಹಚರರನ್ನು ಕರೆಸಿಕೊಂಡ, ಆದರೆ ಅವರನ್ನಿಟ್ಟುಕೊಂಡು ತನ್ನ ಬಿಸಿನೆಸ್ ಮುಂದುವರಿಸಲು ಸಾಧ್ಯವಾಗಲಿಲ್ಲ, 
 2017ರ ಡಿಸೆಂಬರ್ ತಿಂಗಳಲ್ಲಿ ಪೂಜಾರಿ ಸಹಚರರೆಂದು ಹೇಳಿಕೊಂಡ ಇಬ್ಬರು ಮಂಗಳೂರಿನ ಕಾರ್ ಸ್ಚ್ರೀಟ್ ನಲ್ಲಿ ಎಂ. ಸಂಜೀವ್ ಶೆಟ್ಟಿ ಎಂಬುವರ ಮೇಲೆ ಪೈರಿಂಗ್ ನಡೆದಿತ್ತು, 
ರವಿ ಪೂಜಾರಿ ಜೊತೆ ಹೇಮಂತ್ ಪೂಜಾರಿ ಹೆಸರು ಸೇರಿಕೊಂಡಿತ್ತು, ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ, 
ಉದ್ಯಮಿಗಳಿಗೆ, ಶ್ರೀಮಂತ ವ್ಯಕ್ತಿಗಳಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದನು, 2 ಕೋಟಿ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದನು, ಆರಂಭದಲ್ಲಿ ಕೇವಲ ಶ್ರೀಮಂತರಿಗೆ ಕರೆ ಮಾಡುತ್ತಿದ್ದ ರವಿ ಪೂಜಾರಿ, ಬೇರೆಯವರು ಮಾಡಿದ ಅಪರಾಧಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಪ್ರಾರಂಭಿಸಿದ ಎಂದು ಮಂಗಳೂರಿನ ಪಶ್ಚಿಮ ವಿಭಾಗದ ನಿವೃತ್ತ ಐಜಿಪಿ ಪಿ. ಹರಿಶ್ಚಂದ್ರ ಹೇಳಿದ್ದಾರೆ.
ರವಿ ಪೂಜಾರಿ ಅವನತಿ ಹಾದಿ ಹಿಡಿಯಲು ಹಲವು ಕಾರಣಗಳಿವೆ, ಆತನ ಸಹಚರರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಂಡರು, ಮಂಗಳೂರಿನಲ್ಲಿ ಆತನ ಬಲಗೈ ಬಂಟನಾಗಿದ್ದ ಕಾಳಿ ಯೋಗೇಶ್ ಪೂಜಾರಿಯಿಂದ ಪ್ರತ್ಯೇಕವಾದದ್ದು, ಆತನಿಗೆ ದೊಡ್ಡ ಹಿನ್ನಡೆಯಾಯಿತು. 
ಮುಂಬಯಿ ಪೊಲೀಸರು ಆತನ ಮತ್ತೊಬ್ಬ ಸಹಚರ ಆಕಾಶ್ ಶೆಟ್ಟಿಯನ್ನು ಬಂಧಿಸಿದರು. ಮತ್ತೊಬ್ಬ ಬಂಟ ವಿಲಿಯಮ್ ರೋಡ್ರಿಗಸ್ ಕೂಡ ಪೊಲೀಸರ ವಶಕ್ಕೆ ಸೇರಿದ. ಈಗ ಅಂತಿಮವಾಗಿ  ಪಾತಕಿ ರವಿ ಪೂಜಾರಿ ಕೂಡ ಪೊಲೀಸರ ಅತಿಥಿಯಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!