ತೃತೀಯ ಲಿಂಗಿಗಳು 
ರಾಜ್ಯ

ಚಿಕ್ಕಮಗಳೂರು: ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡ ತೃತೀಯಲಿಂಗಿಗಳು!

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರದಲ್ಲಿ 8 ಮಂದಿ ತೃತೀಯ ಲಿಂಗಿಗಳ ಗುಂಪು ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡಿದ್ದಾರೆ.

ತರೀಕೆರೆ: ಸಮಾಜದಲ್ಲಿ ಕನಿಷ್ಠ ಗೌರವ, ಅಸಭ್ಯ ವರ್ತನೆ, ಲೈಂಗಿಕ ಪ್ರಚೋದನೆ ಮತ್ತಿತರ ಕಾರಣಗಳಿಂದಾಗಿ ತೃತೀಯಲಿಂಗಿಗಳನ್ನು ಕಳಂಕಿತ ಸಮುದಾಯದ ರೀತಿಯಲ್ಲಿ ನೋಡಲಾಗುತ್ತದೆ. ಆದರೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರದಲ್ಲಿ  8 ಮಂದಿ ತೃತೀಯ ಲಿಂಗಿಗಳ ಗುಂಪು ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡಿದ್ದಾರೆ.

ನಾಲ್ಕು ವರ್ಷಗಳಿಂದ 4.5 ಎಕರೆ ಜಮೀನಿನಲ್ಲಿ ಅವರು ಕೃಷಿ ಮಾಡುವ ಮೂಲಕ ಸುಂದರ ಬದುಕು ರೂಪಿಸಿಕೊಂಡಿದ್ದಾರೆ.ಇದರಲ್ಲಿ ಎರಡು ಎಕರೆ ಜಮೀನನ್ನು ಬೇರೊಬ್ಬರಿಂದ  ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಅಂಜು,ಆಕೆಯ ಸ್ನೇಹಿತೆಯರಾದ ಸ್ಪೂರ್ತಿ, ಮೇಘಾ ಮಲ್ನಾಡ್, ಪ್ರೇಮ, ಹರ್ಷಿತಾ, ಭಾಗ್ಯ, ಕಾವ್ಯ ಮತ್ತು  ಅಭಿಷೇಕ್  ಬೇಸಾಯ ಮಾಡುವ ಮೂಲಕ ಸ್ವತಂತ್ರವಾದ ಜೀವನ ಸಾಗಿಸುತ್ತಿದ್ದಾರೆ.

ಹತ್ತನೆ ತರಗತಿಯಲ್ಲಿದ್ದಾಗ  ಹಳ್ಳಿಯನ್ನು ತೊರೆದ ಅಂಜು ಮೈಸೂರಿನಲ್ಲಿ ಮತ್ತೊಬ್ಬ ತೃತೀಯಲಿಂಗಿ ಜೊತೆಗೂಡಿ ಮುಂಬೈ ಹಾಗೂ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡಿದ್ದಾರೆ. ದಿನಕಳೆದಂತೆ ಆಕೆಯ ಬಗ್ಗೆ ನೋವಿನ ಭಾವನೆ ಉಂಟಾಗಿ ಸ್ವತಂತ್ರವಾಗಿ ಜೀವಿಸಬೇಕೆಂಬ ನಿರ್ಧಾರಕ್ಕೆ ಬಂದರಂತೆ. ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಒಬ್ಬ ತೃತೀಯ ಲಿಂಗಿಗಳು ತಪ್ಪು ಮಾಡಿದರೆ  ಇಡೀ ಸಮುದಾಯದತ್ತ ಬೆರಳು ಮಾಡಿ ತೋರಿಸಲಾಗುತ್ತದೆ. ಮತ್ತೆ ಬಂದು ಕುಟುಂಬದೊಂದಿಗೆ ಜೀವಿಸೋಣ ಎಂದರೆ ಅವರು ಸೇರಿಸಿಕೊಳ್ಳಲಿಲ್ಲ,ಈ ಮಧ್ಯೆ ಕೆಲವು ಜನರು  ನನನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು. ಈ ಎಲ್ಲಾ ನಿಂದನೆಗಳನ್ನು ಸಹಿಸಿ ಏನಾದರೂ ಮಾಡಿ ತೋರಿಸಬೇಕೆಂಬ ಛಲದೊಂದಿಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಿಂದ ಕೃಷಿ ಬಗ್ಗೆ ತರಬೇತಿ ಪಡೆದು ನಾಲ್ಕು ವರ್ಷದ ಹಿಂದೆ ಹಸು ಕೊಂಡುಕೊಂಡಿದ್ದಾಗಿ ಹೇಳುವ ಅಂಜು, ನಂತರ ವಂಶಪಾರಂಪರ್ಯವಾಗಿ ಬಂದ ಎರಡು ಎಕರೆ ಜಮೀನು ಪಡೆದುಕೊಂಡಿದ್ದಾಗಿ ತಿಳಿಸಿದರು.

ಸ್ವಲ್ಪ ದಿನ ಆದ ಬಳಿಕ ಹತ್ತಿರದಲ್ಲೇ  ಮತ್ತೊಬ್ಬರಿಂದ ಎರಡೂವರೆ  ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿದ್ದು, ತೃತೀಯ ಲಿಂಗಿ ಸ್ನೇಹಿತರನ್ನು ಕರೆದು ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ವಿವರಿಸಿದರು.
ಅಂಜು ಸ್ನೇಹಿತೆ ಮೇಘಾ ಮಾದಿಲು ಸೇವಾ ಸಂಸ್ಥೆ ಸ್ಥಾಪಕಿಯಾಗಿದ್ದಾರೆ. ಇದು ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಾಗಿದೆ. ಅಂಜು ಈಗ ತನ್ನದೇ ಆದ ಸ್ವಂತ ಮನೆಯನ್ನು ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ.  ಕಳೆದ ವರ್ಷ  ಆಲೂಗಡ್ಡೆ, ಮೆಕ್ಕೆಜೋಳ, ಹಸಿರು ಬಟಾಣಿ ಮತ್ತಿತರ ಬೆಳೆ ಬೆಳೆದಿದ್ದಾಗಿ ಅಂಜು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT