ತೃತೀಯ ಲಿಂಗಿಗಳು 
ರಾಜ್ಯ

ಚಿಕ್ಕಮಗಳೂರು: ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡ ತೃತೀಯಲಿಂಗಿಗಳು!

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರದಲ್ಲಿ 8 ಮಂದಿ ತೃತೀಯ ಲಿಂಗಿಗಳ ಗುಂಪು ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡಿದ್ದಾರೆ.

ತರೀಕೆರೆ: ಸಮಾಜದಲ್ಲಿ ಕನಿಷ್ಠ ಗೌರವ, ಅಸಭ್ಯ ವರ್ತನೆ, ಲೈಂಗಿಕ ಪ್ರಚೋದನೆ ಮತ್ತಿತರ ಕಾರಣಗಳಿಂದಾಗಿ ತೃತೀಯಲಿಂಗಿಗಳನ್ನು ಕಳಂಕಿತ ಸಮುದಾಯದ ರೀತಿಯಲ್ಲಿ ನೋಡಲಾಗುತ್ತದೆ. ಆದರೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರದಲ್ಲಿ  8 ಮಂದಿ ತೃತೀಯ ಲಿಂಗಿಗಳ ಗುಂಪು ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡಿದ್ದಾರೆ.

ನಾಲ್ಕು ವರ್ಷಗಳಿಂದ 4.5 ಎಕರೆ ಜಮೀನಿನಲ್ಲಿ ಅವರು ಕೃಷಿ ಮಾಡುವ ಮೂಲಕ ಸುಂದರ ಬದುಕು ರೂಪಿಸಿಕೊಂಡಿದ್ದಾರೆ.ಇದರಲ್ಲಿ ಎರಡು ಎಕರೆ ಜಮೀನನ್ನು ಬೇರೊಬ್ಬರಿಂದ  ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಅಂಜು,ಆಕೆಯ ಸ್ನೇಹಿತೆಯರಾದ ಸ್ಪೂರ್ತಿ, ಮೇಘಾ ಮಲ್ನಾಡ್, ಪ್ರೇಮ, ಹರ್ಷಿತಾ, ಭಾಗ್ಯ, ಕಾವ್ಯ ಮತ್ತು  ಅಭಿಷೇಕ್  ಬೇಸಾಯ ಮಾಡುವ ಮೂಲಕ ಸ್ವತಂತ್ರವಾದ ಜೀವನ ಸಾಗಿಸುತ್ತಿದ್ದಾರೆ.

ಹತ್ತನೆ ತರಗತಿಯಲ್ಲಿದ್ದಾಗ  ಹಳ್ಳಿಯನ್ನು ತೊರೆದ ಅಂಜು ಮೈಸೂರಿನಲ್ಲಿ ಮತ್ತೊಬ್ಬ ತೃತೀಯಲಿಂಗಿ ಜೊತೆಗೂಡಿ ಮುಂಬೈ ಹಾಗೂ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡಿದ್ದಾರೆ. ದಿನಕಳೆದಂತೆ ಆಕೆಯ ಬಗ್ಗೆ ನೋವಿನ ಭಾವನೆ ಉಂಟಾಗಿ ಸ್ವತಂತ್ರವಾಗಿ ಜೀವಿಸಬೇಕೆಂಬ ನಿರ್ಧಾರಕ್ಕೆ ಬಂದರಂತೆ. ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಒಬ್ಬ ತೃತೀಯ ಲಿಂಗಿಗಳು ತಪ್ಪು ಮಾಡಿದರೆ  ಇಡೀ ಸಮುದಾಯದತ್ತ ಬೆರಳು ಮಾಡಿ ತೋರಿಸಲಾಗುತ್ತದೆ. ಮತ್ತೆ ಬಂದು ಕುಟುಂಬದೊಂದಿಗೆ ಜೀವಿಸೋಣ ಎಂದರೆ ಅವರು ಸೇರಿಸಿಕೊಳ್ಳಲಿಲ್ಲ,ಈ ಮಧ್ಯೆ ಕೆಲವು ಜನರು  ನನನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು. ಈ ಎಲ್ಲಾ ನಿಂದನೆಗಳನ್ನು ಸಹಿಸಿ ಏನಾದರೂ ಮಾಡಿ ತೋರಿಸಬೇಕೆಂಬ ಛಲದೊಂದಿಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಿಂದ ಕೃಷಿ ಬಗ್ಗೆ ತರಬೇತಿ ಪಡೆದು ನಾಲ್ಕು ವರ್ಷದ ಹಿಂದೆ ಹಸು ಕೊಂಡುಕೊಂಡಿದ್ದಾಗಿ ಹೇಳುವ ಅಂಜು, ನಂತರ ವಂಶಪಾರಂಪರ್ಯವಾಗಿ ಬಂದ ಎರಡು ಎಕರೆ ಜಮೀನು ಪಡೆದುಕೊಂಡಿದ್ದಾಗಿ ತಿಳಿಸಿದರು.

ಸ್ವಲ್ಪ ದಿನ ಆದ ಬಳಿಕ ಹತ್ತಿರದಲ್ಲೇ  ಮತ್ತೊಬ್ಬರಿಂದ ಎರಡೂವರೆ  ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿದ್ದು, ತೃತೀಯ ಲಿಂಗಿ ಸ್ನೇಹಿತರನ್ನು ಕರೆದು ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ವಿವರಿಸಿದರು.
ಅಂಜು ಸ್ನೇಹಿತೆ ಮೇಘಾ ಮಾದಿಲು ಸೇವಾ ಸಂಸ್ಥೆ ಸ್ಥಾಪಕಿಯಾಗಿದ್ದಾರೆ. ಇದು ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಾಗಿದೆ. ಅಂಜು ಈಗ ತನ್ನದೇ ಆದ ಸ್ವಂತ ಮನೆಯನ್ನು ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ.  ಕಳೆದ ವರ್ಷ  ಆಲೂಗಡ್ಡೆ, ಮೆಕ್ಕೆಜೋಳ, ಹಸಿರು ಬಟಾಣಿ ಮತ್ತಿತರ ಬೆಳೆ ಬೆಳೆದಿದ್ದಾಗಿ ಅಂಜು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್‌ಗಳಿಂದ ಗೆದ್ದ ಭಾರತ U-19 ತಂಡ

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!