ರಾಜ್ಯ

ತುಮಕೂರು: ಪ್ರೇಮ ವೈಫಲ್ಯ, ಸೈನೈಡ್ ನುಂಗಿ ಯುವಪ್ರೇಮಿಗಳ ಆತ್ಮಹತ್ಯೆ!

Raghavendra Adiga
ತುಮಕೂರು: ಪ್ರೀತಿಗೆ ಮನೆಯವರ ಅಡ್ಡಿಯಿಂದಗಿ ಬೇಸತ್ತ ಯುವಪ್ರೇಮಿಗಳು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದಿದೆ.
ಶಿರಾ ತಾಲೂಕಿನ ಭೂವನಹಳ್ಳಿಯಲ್ಲಿ ನಡೆದ ಘಟನೆಯಲ್ಲಿ .ಚೇತನ್ (25) ಹಾಗೂ ನಿವೇದಿತಾ (20) ದುರಂತ ಸಾವಿಗೀಡಾಗಿದ್ದಾರೆ. 
ಭೂವನಹಳ್ಳಿ ನಿವಾಸಿಯಾಗಿದ್ದ ಚೇತನ್ ನಾಯಕನಹಟ್ಟಿಯಲ್ಲಿರುವ ವಿಶ್ವಕರ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾಗಿದ್ದ ನಿವೇದಿತಾಳನ್ನು ಪ್ರೀತಿಸುತ್ತಿದ್ದ. ಈ ಜೋಡಿ ಹಲವು ತಿಂಗಳಿನಿಂದ ಪ್ರೇಮದಲ್ಲಿದ್ದರೂ ಮನೆಯವರು ಇವರ ಪ್ರೀತಿಗೆ ಸಮ್ಮತಿಸಿರಲಿಲ್ಲ.
ಕಳೆದ ಒಂದೂವರೆ ತಿಂಗಳ ಹಿಂದೆ ಮನೆಯವರ ಬಲವಂತಕ್ಕೆ ಯುವಕ ಚೇತನ್ ಬೇರೊಬ್ಬಳನ್ನು ಮದುವೆಯಾಗಿದ್ದ,  ಆದರೆ ತಾನು ಪ್ರೀತಿಸಿದ್ದ ಹುಡುಗಿಯಿಂದ ಬೇರಾಗಲು ಸಾಧ್ಯವಾಗಿರಲಿಲ್ಲ. 
ಇದೇ ಕಾರಣಕ್ಕೆ ಇಬ್ಬರೂ ರಾತ್ರೋರಾತ್ರಿ ರಾತ್ರಿ ಭೂವನಹಳ್ಳಿಯ ಹೊಲಕ್ಕೆ ಆಗಮಿಸಿದ್ದು ಅಲ್ಲಿ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಹೊಲದಲ್ಲಿ ಜೋಡಿ ಶವಗಳನ್ನು ಕಂಡ ಗ್ರಾಮಸ್ಥರು ಪೋಲೀಸರಿಗೆ ಮಾಹಿತಿ ನೀಡಿದ್ದು ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT