ರಾಜ್ಯ

ಕೆಆರ್ ಎಸ್ ಹಿನ್ನೀರಿನಲ್ಲಿ ಎಸ್ ಯುವಿ ವಾಹನ ಚಾಲನೆ: ಯುವಕನ ವಿರುದ್ಧ ಎಫ್ಐಆರ್ ದಾಖಲು

Sumana Upadhyaya

ಮಂಡ್ಯ: ಕೆಆರ್ ಎಸ್ ಹಿನ್ನೀರಿನಲ್ಲಿ ಎಸ್ ಯುವಿ ವಾಹನವನ್ನು ಯುವಕ ಚಲಾಯಿಸಿದ ವಿಡಿಯೋ ವೈರಲ್ ಆದ ನಂತರ ಅಲ್ಲಿನ ಪೊಲೀಸರು ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಧರ್ಮ ಪ್ರಕಾಶ್ ಎಂಬುವವರ ಪುತ್ರ ವಿಕ್ರಮ್ ಧರ್ಮ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ 447ರಡಿಯಲ್ಲಿ ಮತ್ತು ಕರ್ನಾಟಕ ನೀರಾವರಿ ಕಾಯ್ದೆ ಅಡಿ ಕೇಸು ದಾಖಲಾಗಿದೆ.

ಮೈಸೂರು ಮೂಲದ ಧರ್ಮ, ಕೆಆರ್ ಎಸ್ ಹಿನ್ನೀರಿನ ಪಕ್ಕ ಆತನ ತಂದೆಯ ತೋಟವಿದೆ. ಎಸ್ ಯುವಿ ವಾಹನವನ್ನು ವಿಕ್ರಮ್ ಧರ್ಮ ಚಲಾಯಿಸುತ್ತಿದ್ದು ಆತನ ಸ್ನೇಹಿತರು ಉತ್ತೇಜನ ನೀಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಕೆಆರ್ ಎಸ್ ನ ಕಾವೇರಿ ನೀರಾವರಿ ನಿಗಮ ನಿಯಮಿತದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ತಮ್ಮೇ ಗೌಡ ವಿಕ್ರಮ್ ಧರ್ಮ ವಿರುದ್ಧ ಕೇಸು ದಾಖಲಿಸಿದ್ದಾರೆ.

SCROLL FOR NEXT