ರಾಜ್ಯ

ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ: ಶೀಘ್ರ ಗುಣಮುಖರಾಗಲು ಪ್ರಾರ್ಥನೆ

Shilpa D
ತುಮಕೂರು: ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದರು. 
ಆಸ್ಪತ್ರೆ ವೈದ್ಯರ ಮುಖಾಂತರ ಶ್ರೀಗಳ ಆರೋಗಯದ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ, ಸ್ವಾಮೀಜಿ ಅವರು ಶ್ವಾಸಕೋಶ ಸೋಂಕಿನಿಂದ  ಗುಣಮುಖರಾಗುತ್ತಿದ್ದಾರೆ,  ನಾನು ಕಿರಿಯ ಸ್ವಾಮೀಜಿ ಸಿದ್ದಲಿಂಗ ಶ್ರೀಗಳ ಅನುಮತಿ ಪಡೆದು ಸಿದ್ದಗಂಗಾ ಸ್ವಾಮೀಜಿ ಗಳನ್ನು ಭೇಟಿ ಮಾಡಿದ್ದೇನೆ ಎಂದು  ಶ್ರೀಗಳ ಭೇಟಿ ಬಳಿಕ ಕುಮಾರ ಸ್ವಾಮಿ ತಿಳಿಸಿದರು. 
ಶ್ರೀಗಳ ದರ್ಶನಕ್ಕಾಗಿ ಆಸ್ಪತ್ರೆ ಕಡೆಗೆ ಯಾವುದೇ ಭಕ್ತರು ಬರಬಾರದು. ಭಕ್ತರು ಬರುವುದರಿಂದ ವಿಶ್ರಾಂತಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿದರು. 
SCROLL FOR NEXT