ರಾಜ್ಯ

ಕಲಬುರಗಿ: ಪ್ರೊಬೇಷನರಿ ಪಿಎಸ್ಐ ಅನುಮಾನಾಸ್ಪದ ಸಾವು

Manjula VN
ಕಲಬುರಗಿ: ನಾಗೇನಹಳ್ಳಿ ತರಬೇತಿ ಕೇಂದ್ರದಲ್ಲಿ ಪಿಎಸ್ಐ ಪ್ರಶಿಕ್ಷಣಾರ್ಥಿಯಾಗಿದ್ದ ಪಿಎಸ್ಐ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. 
ಬಸವರಾಜ್ ಎಸ್ ಮಂಚೆನ್ನವರ್ ಸಾವನ್ನಪ್ಪಿರುವ ಪಿಎಸ್ಐ ಆಗಿದ್ದಾರೆ. ಅನಾರೋಗ್ಯ ಸಮಸ್ಯೆ ಹೇಳಿದ್ದ ಬಸವರಾಜ್ ಅವರು, ಹುಟ್ಟೂರಿಗೆ ಹೋಗಬೇಕೆಂದು ಶನಿವಾರ ರಜೆ ಪಡೆದುಕೊಂಡಿದ್ದರು. ರಜೆ ಮುಗಿದ ಬಳಿಕವೂ ವಾಪಸ್ಸಾಗದ ಹಿನ್ನಲೆಯಲ್ಲಿ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. 
ಹೊಸ ಜೆವರ್ಗಿ ರಸ್ತೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರ ಮೃತದೇಹ ರಾಮ ಮಂದಿರದ ಬಳಿ ಬಿದ್ದಿರುವುದಾಗಿ ಅದಿಕಾರಿಗಳಿಗೆ ಕೆಲ ಸ್ಥಳೀಯರು ಹೇಳಿದ್ದಾರೆ. ಕೂಡಲೇ ಸ್ಥಳಕ್ಕ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹ ಬಸವರಾಜ್ ಅವರದ್ದು ಎಂಬುದಾಗಿ ತಿಳಿದುಬಂದಿದೆ. 
ಮೃತದೇಹದ ಬಾಯಿಯಿಂದ ನೊರೆ ಬಂದಿರುವುದು ಕಂಡು ಬಂದಿದೆ. ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಬೆನಕನಹಳ್ಳಿ ಗ್ರಾಮಕ್ಕೆ ಕರೆದೊಯ್ಯಲಾಗಿದ್ದು, ಸೋಮವಾರ ಅಂತಿಮ ಸಂಸ್ಕಾರ ನಡೆಸಲಾಗಿದೆ. ಪ್ರಕರಣ ಸಂಬಂಧ ಸಚಿವ ಪ್ರಿಯಾಂಕಾ ಖರ್ಗೆಯವರು ಮೃತ ಪಿಎಸ್ಐ ಬಸವರಾಜ್ ಅವರ ಕುಟುಂಬಗಕ್ಕೆ ರೂ.50 ಸಾವಿರ ಪರಿಹಾರ ನೀಡಿದ್ದಾರೆ. 
SCROLL FOR NEXT