ಹುಬ್ಬಳ್ಳಿ: ನೈಋತ್ಯ ರೈಲ್ವೆಯ ತಾಳಗುಪ್ಪ-ಬೆಂಗಳೂರು ನಗರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 20652) ರೈಲು ಬುಧವಾರದಿಂದ ಫೆಬ್ರವರಿ 28ರವರೆಗೆ ಮೈಸೂರು ವಿಭಾಗದ ಚಿಕ್ಕಜಾಜೂರ-ಅರಸಿಕೆರೆ ವಿಭಾಗದಲ್ಲಿ ತಾಂತ್ರಿಕ ಕಾರ್ಯದ ಕಾರಣದಿಂದ ನಿಲುಗಡೆಗೊಂಡು ಸಂಚಾರ ಮುಂದುವರಿಸಲಿದೆ.
ತಾಳಗುಪ್ಪ-ಬೆಂಗಳೂರು ನಗರ ಎಕ್ಸ್ಪ್ರೆಸ್ ರೈಲು ಇಂದಿನಿಂದ ಫೆಬ್ರವರಿ 2ರವರೆಗೆ ಬಾಣಾವರದಲ್ಲಿ 20 ನಿಮಿಷ ನಿಲ್ಲಲಿದೆ. ಮುಂದಿನ ತಿಂಗಳು ಫೆಬ್ರವರಿ 3ರಿಂದ 10ರವರೆಗೆ ದೇವನೂರ ನಿಲ್ದಾಣದಲ್ಲಿ 10 ನಿಮಿಷ ನಿಲುಗಡೆಗೊಂಡು ಮುಂದೆ ಸಾಗಲಿದೆ.
ಫೆಬ್ರವರಿ 11ರಿಂದ ಫೆಬ್ರವರಿ 21ರವರೆಗೆ ಬಳ್ಳೆಕೆರೆಯಲ್ಲಿ 10 ನಿಮಿಷ, ಫೆಬ್ರವರಿ 22ರಿಂದ 28ರವರೆಗೆ ಕಡೂರ ನಿಲ್ದಾಣದಲ್ಲಿ 5 ನಿಮಿಷ ನಿಲುಗಡೆಗೊಂಡು ಮುಂದೆ ಸಾಗಲಿದೆ.