ರಾಜ್ಯ

ಹಿಂದೂ ಹುಡುಗಿಯ ಮೈ ಮುಟ್ಟಿದರೆ ಹೀಗೆ ಮಾಡ್ಬೇಕು: ಅನಂತ್ ಕುಮಾರ್ ಹೆಗ್ಡೆ ಹೇಳಿದ್ದು ಏನು?

Srinivas Rao BV
ಬೆಂಗಳೂರು: ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಈಗ ಅಂಥಹದ್ದೇ ಒಂದು ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದಾರೆ. 
ಈ ಬಾರಿ ಹಿಂದೂ ಹುಡುಗಿಯರ ಕುರಿತು ಹೇಳಿಕೆ ನೀಡಿರುವ ಅನಂತ್ ಕುಮಾರ್ ಹೆಗ್ಡೆ, "ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು, ಪೌರುಷ ಇದ್ದರೆ ಇತಿಹಾಸ ಬರೆಯಿರಿ ಎಂದು ಹೇಳಿದ್ದಾರೆ. 
ಕೊಡಗು ಜಿಲ್ಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ದೇವರಿಗೆ ಯಾರೂ ಆನೆ, ಹುಲಿಯನ್ನು ಬಲಿಕೊಡುವುದಿಲ್ಲ. ದುರ್ಬಲವಾದ ಕುರಿ-ಕೋಳಿಗಳನ್ನೇ ಬಲಿ ಕೊಡೋದು, ನೀವು ಕುರಿ-ಕೋಳಿಗಳಾಗಬೇಡಿ ಎಂದು ಕರೆ ನೀಡಿದ್ದಾರೆ. 
ಇನ್ನು ಇದೇ ವೇಳೆ ಐತಿಹಾಸಿಕ ಕಟ್ಟಡಗಳಾದ ಕುತುಬ್ ಮಿನಾರ್, ತಾಜ್ ಮಹಲ್ ಗಳ ಬಗ್ಗೆಯೂ ಅನಂತ್ ಕುಮಾರ್ ಹೆಗ್ಡೆ ಮಾತನಾಡಿದ್ದು, ಕುತುಬ್ ಮಿನಾರ್ ಕಟ್ಟಿದ್ದು ಮುಸಲ್ಮಾನರಲ್ಲ ಅದು ನಿರ್ಮಾಣವಾಗಿದ್ದು ಜೈನರ ಕಾಲದಲ್ಲಿ. ತಾಜ್ ಮಹಲ್ ನ್ನು  ರಾಜಾ ಜಯಸಿಂಹನಿಂದ ಖರೀದಿಸಿದ ಕಟ್ಟಡ ಅದಾಗಿತ್ತು ಎಂದು ಹಲಫನಾಮದಲ್ಲಿ ಷಹಜಹಾನ್ ಸ್ವತಃ ಇದನ್ನು ಹೇಳಿದ್ದಾನೆ, ಜಯಸಿಂಹನಿಂದ ಖರೀದಿಸಿದ ಬಳಿಕ ತೇಜೋ ಮಹಾಲಯ ತಾಜ್ ಮಹಲ್ ಆಯ್ತು  ಎಂದು  ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. 
SCROLL FOR NEXT