ರಾಜ್ಯ

ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವತಿಯರ ರಂಪಾಟ; ಆಟೋ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ

Shilpa D
ಬೆಂಗಳೂರು: ಕುಡಿದ ಮತ್ತಿನಲ್ಲಿ ಮೂವರು ಯುವತಿಯರು ಆಟೋ ಚಾಲಕನನ್ನು ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗದೇವನಹಳ್ಳಿ ನಿವಾಸಿ ಸುರೇಂದ್ರ ಬಾಬು ಎಂಜಿ ರಸ್ತೆಯಿಂದ ಯುವತಿಯರನ್ನು ಆಟೋಗೆ ಹತ್ತಿಸಿಕೊಂಡಿದ್ದಾರೆ, ವಿಜಯನಗರದ ಸಮೀಪದ ಹೊಸಹಳ್ಳಿಯಲ್ಲಿ ಅವರನ್ನು ಡ್ರಾಪ್ ಮಾಡಬೇಕಿತ್ತು. ನಿಲ್ಲಲು ಸಾಧ್ಯವಾಗದೇ ತೂರಾಡುವ ಸ್ಥಿತಿಯಲ್ಲಿದ್ದ ಅವರು ಜೋರಾಗಿ ಕೂಗಾಡುತ್ತಿದ್ದರು. ಹಾಗೂ ಆಟೋ ಚಾಲಕನನ್ನು ಸುಮ್ಮನಿರುವಂತೆ ಗದರುತ್ತಿದ್ದರು.
ಕೂಗಾಡಿ ಕಿರಿಕಿರಿ ಮಾಡುತ್ತಿದ್ದ ಯುವತಿಯರು ನನ್ನನ್ನು ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು, ಇಳಿಯುವಾಗ ಶೂ ನಿಂದ ನನಗೆ ಹೊಡೆದರು, ಈ ವೇಳೆ ಅಕ್ಕಪಕ್ಕದಲ್ಲಿದ್ದ ಜನರು ಅವರನ್ನು ಹಿಡಿಯಲು ಪ್ರಯತ್ನಿಸಿದರು, ಆದರೆ ಅಲ್ಲಿಂದ ಮೂವರು ಓಡಿಹೋದರು ಎಂದು ಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ,  ಅಪರಿಚಿತ ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಯುವತಿಯರಿಗಾಗಿ ಬಲೆ ಬೀಸಿದ್ದಾರೆ.
SCROLL FOR NEXT