ಮೋಹನ್‍ಕುಮಾರ್ 
ರಾಜ್ಯ

ಅಮ್ಮಾ, ಚಿನ್ನು ನಿಮ್ಮ ಮನಸ್ಸು ನೋಯಿಸಿದ್ದಕ್ಕೆ ಕ್ಷಮಿಸಿ: ಹರಿಯಾಣದಲ್ಲಿ ಹಾಸನದ ಯೋಧ ಆತ್ಮಹತ್ಯೆ!

ಅಮ್ಮಾ, ಚಿನ್ನೂ ನಾನು ನಿಮಗೇನಾದರೂ ನೋವು ಉಂಟು ಮಾಡಿದ್ದಾದರೆ ದಯವಿಟ್ಟು ಕ್ಷಮಿಸಿ! ಲವ್ ಯು ಅಮ್ಮಾ, ಲವ್ ಯು ಚಿನ್ನೂಟೇಕ್ ಕೇರ್, ಐ ವಿಲ್ ಬಿ ಸೂನ್... ಹೀಗೊಂದು ಡೆತ್ ನೋಟ್ ಬರೆದಿಟ್ಟು....

ಹಾಸನ: ಅಮ್ಮಾ, ಚಿನ್ನೂ ನಾನು ನಿಮಗೇನಾದರೂ ನೋವು ಉಂಟು ಮಾಡಿದ್ದಾದರೆ ದಯವಿಟ್ಟು ಕ್ಷಮಿಸಿ! ಲವ್ ಯು ಅಮ್ಮಾ, ಲವ್ ಯು ಚಿನ್ನೂಟೇಕ್ ಕೇರ್, ಐ ವಿಲ್ ಬಿ ಸೂನ್... ಹೀಗೊಂದು ಡೆತ್ ನೋಟ್ ಬರೆದಿಟ್ಟು ಹಾಸನ ಮೂಲದ ಯೋಧ ಹರಿಯಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನದ ಆಲೂರು ತಾಲ್ಲೂಕಿನ ಕಾದಾಳು ಗ್ರಾಮದ ಮೋಹನ್‍ಕುಮಾರ್ (28) ರಿಯಾಣದ ಶಿರಸಾದಲ್ಲಿ ಆತಮಹತ್ಯೆ ಮಾಡಿಕೊಂಡಿದ್ದಾರೆ. 
ಬಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೋಹನ್‍ಕುಮಾರ್ ಕಳೆದ ಎಂಟು ವರ್ಷಗಳಿಂದ ಶಿರಸಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಶುಕ್ರವಾರ ಡೆತ್ ನೋಟ್ ಬರೆದಿಟಿದ್ದ ಯೋಧ ಕಛೇರಿಯ ಶೌಚಗೃಹದಲ್ಲಿ ತನ್ನ ರೈಫಲ್ ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧನ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.  
ಯೋಧನಿಗೆ ಕಳೆದ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.
ಶನಿವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಭಾನುವಾರ ಸ್ವಗ್ರಾಮಕ್ಕೆ ಮೃತದೇಹ ಆಗಮಿಸಲಿದೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಮೃತರಿಗೆ ಪತ್ನಿ, ತಂದೆ, ತಾಯಿ, ಸಹೋದ ಇದ್ದು ಕುಟುಂಬಿಕರು, ಸ್ನೇಹಿತರ ಶೋಕ ಮುಗಿಲು ಮುಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: NDA ಸೀಟು ಹಂಚಿಕೆ ಅಂತಿಮ; ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ಇದೆಂಥಾ ಕ್ರೌರ್ಯ: ಮದ್ಯ ಮಾರಾಟ ನಿಷೇಧ ಉಲ್ಲಂಘಿಸಿದ್ದ ಬ್ರಾಹ್ಮಣನ ಟೀಕಿಸಿ ಪೋಸ್ಟ್; OBC ವ್ಯಕ್ತಿಗೆ ಅದೇ ಬ್ರಾಹ್ಮಣನ ಪಾದ ತೊಳೆದು ನೀರು ಕುಡಿಯುವ ಶಿಕ್ಷೆ!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ; ರಷ್ಯಾದ ಬಿಗ್ ವಾರ್ನಿಂಗ್ ಏನು?

SCROLL FOR NEXT