ರಾಜ್ಯ

ಉಡುಪಿ: ಶ್ರೀಕೃಷ್ಣ ಮಠದ ಗೋಪುರಕ್ಕೆ ಸ್ವರ್ಣ ಕವಚ, ಬ್ರಹ್ಮಕಲಶೋತ್ಸವದಲ್ಲಿ ಸಂಸದೆ ಶೋಭಾ ಭಾಗಿ

Raghavendra Adiga
ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಗರ್ಭಗೃಹದ ಗೋಪುರಕ್ಕೆ ಸ್ವರ್ಣ ಕವಚ ಸಮರ್ಪಣಾ ಕಾರ್ಯಕ್ರಮ ನೆರವೇರಿದೆ. ಸಂಸದೆ ಶೋಭಾ ಕರಂದ್ಲಾಜೆ ಸೇರಿ ಹಲವು ಗಣ್ಯರು, ಮಹನೀಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದಾರೆ.
ಭಾನುವಾರ ದೇವಾಲಯದಲ್ಲಿ ಬ್ರಹ್ಮಕಲಶೊತ್ಸವ ನೆರವೇರಿದೆ. 
ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಸ್ವರ್ಣ ಕವಚ ಸಮರ್ಪಣೆ ಕಾರ್ಯಕ್ರಮ ಕಳೆದ ಹಲವು ದಿನಗಳಿಂಡ ನಡೆಯುತ್ತಿದೆ.
>
2,500 ಚದರಡಿ ವಿಸ್ತೀರ್ಣದ ಸುವರ್ಣ ಗೋಪುರಕ್ಕೆ 200 ಕೆ. ಜಿ. ತಾಮ್ರ, 800 ಕೆ. ಜಿ. ಬೆಳ್ಳಿ, 100 ಕೆ. ಜಿ. ಚಿನ್ನ ಬಳಕೆಯಾಗಿದೆ.,ಶೋಭಾ ಕರಂದ್ಲಾಜೆ ತಮ್ಮ ಅಧಿಕೃತ ಫೇಸ್ ಬುಕ್/ಟ್ವಿಟ್ಟರ್ ಖಾತೆಯಲ್ಲಿ ಗೋಪುರ ಸಮರ್ಪಣೆ ಕಾರ್ಯಕ್ರಮದ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.
SCROLL FOR NEXT